ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಡಿ ಬಂಧಿತರಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ನಗರದ 17ನೇ ಎಸಿಎಂಎಂ ನ್ಯಾಯಾಲಯ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ಅವರು ಪರಪ್ಪನ ಅಗ್ರಹಾರದ ಜೈಲು ಸೇರಿದ್ದು ಅವರಿಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿ(UTP) ಸಂಖ್ಯೆ 4567 ನೀಡಲಾಗಿದೆ.
https://ainlivenews.com/f-you-drink-pomegranate-juice-on-an-empty-stomach-in-the-morning/
ಮೇ 4ರಂದು ರೇವಣ್ಣ ಅವರನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನ ವಶಕ್ಕೆ ತೆಗೆದುಕೊಂಡಿದ್ದರು. ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಧಿಯಿಧಿತು. ರೇವಣ್ಣ ಮತ್ತು ಎಸ್ಐಟಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶ ರವೀಂದ್ರಕುಮಾರ್ ಕಟ್ಟಿಮನಿ, ಅಂತಿಮವಾಗಿ ರೇವಣ್ಣ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ವಿಚಾರಣೆಗೆ ಸಹಕರಿಸದ ರೇವಣ್ಣ
‘‘ರೇವಣ್ಣ ಎಸ್ಐಟಿ ವಶದಲ್ಲಿದ್ದಾಗ ತನಿಖೆಗೆ ಸಹಕರಿಸದೆ ಎಲ್ಲಾ ಪ್ರಶ್ನೆಗಳಿಗೂ ನಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಹೀಗಾಗಿ, ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಎಸ್ಐಟಿ ಕಸ್ಟಡಿಗೆ ನೀಡಬೇಕು,’’ ಎಂದು ವಿಶೇಷ ಸರಕಾರಿ ಅಭಿಯೋಜಕರು ರಿಮ್ಯಾಂಡ್ ಅಪ್ಲಿಕೇಶನ್ ಸಲ್ಲಿಸಿದರು.
ಕಣ್ಣೀರು ಹಾಕಿದ ಮಾಜಿ ಸಚಿವ
ನ್ಯಾಯಾಂಗ ಬಂಧನದ ಆದೇಶ ಹೊರಬೀಳುತ್ತಿದ್ದಂತೆ ರೇವಣ್ಣ ಗದ್ಗದಿತರಾದರು. ನ್ಯಾಯಾಲಯ ಕಟ್ಟಡದಿಂದ ಕಣ್ಣೀರು ಹಾಕುತ್ತಲೇ ಹೊರಬಂದ ಅವರನ್ನು ಪೊಲೀಸ್ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಸದ್ಯ ರೇವಣ್ಣ ಅವರನ್ನು ಜೈಲಿನ ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದೆ. ಅವರಿಗೆ ವಿಚಾರಣಾಧೀನ ಕೈದಿ(ಯುಟಿಪಿ) ಸಂಖ್ಯೆ 4567 ನೀಡಲಾಗಿದೆೆ. ವಿಚಾರಣಾಧೀನ ಕೈದಿನಗಳಿಗೆ ಜೈಲು ಮ್ಯಾನುವಲ್ ಪ್ರಕಾರ ಯುಟಿಪಿ ನಂಬರ್ ನೀಡಲಾಗುತ್ತದೆ.
‘‘ಪೊಲೀಸರಿಂದ ನಿಮಗೆ ತೊಂದರೆ ಆಗಿದೆಯಾ?,’’ ಎಂದು ವಿಚಾರಣೆ ವೇಳೆ ನ್ಯಾಯಾಧೀಶರು ರೇವಣ್ಣ ಅವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಧಿಕ್ರಿಧಿಯಿಧಿಸಿದ ರೇವಣ್ಣ, ‘‘ಪೊಲೀಸ್ ಕಸ್ಟಡಿಗೆ ಬಂದು ಮೂರು ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡವಾಗುತ್ತಿದೆ. ಪೊಲೀಸ್ ಅಧಿಕಾರಿಗಳು ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ನನಗೆ ಗೊತ್ತಿಲ್ಲ. ನನಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದೇನೆ, ಅವರು ಎಲ್ಲವನ್ನೂ ದಾಖಲಿಸಿಕೊಂಡಿದ್ದಾರೆ. ತುಂಬಾ ಹೊಟ್ಟೆ ನೋವು ಇದೆ. ರಾತ್ರಿ ಮಲಗಲು ಕೂಡ ಆಗಿಲ್ಲ. ಮೂರು ದಿನಗಳಿಂದ ನಿದ್ದೆ ಮಾಡಿಲ್ಲ,’’ ಎಂದು ಅಲವತ್ತುಕೊಂಡರು.