ಹೊಸಪೇಟೆ: ಗ್ಯಾರಂಟಿ ಮೂಲಕ ಗೆಲ್ಲಬಹುದು ಅಂತ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ರಾಹುಲ್ ಗಾಂಧಿ ಮೋದಿವರಿಗೆ ಭೂಮಿ ಆಕಾಶದಷ್ಟು ವ್ಯತ್ಯಾಸ ಇದೆ ಎಂದು ಹೊಸಪೇಟೆಯಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 50 ವರ್ಷ ಆಳ್ವಿಕೆ ಮಾಡಿದೆ. ಕಾಂಗ್ರೆಸ್ ಪಾರ್ಟಿಗೆ ಸೆಟ್ಟರ್ ಹಾಕುವ ಪರಿಸ್ಥಿತಿ ಬಂದಿದೆ. ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ನವರು ರಾಜಕಾರಣ ಮಾಡ್ತಿದ್ದಾರೆ ಬಡವರು, ರೈತರು ಯಾವ ರೀತಿ ಬದುಕುತ್ತಿದ್ದಾರೆ ಅನ್ನೋದೇ ಕಾಂಗ್ರೆಸ್ ಗೆ ಗೊತ್ತಿದ್ದಿಲ್ಲ, ಇವತ್ತು ರೈತರ ಬಗ್ಗೆ, ಬಡವರ ಬಗ್ಗೆ ನೆನಪಿಸಿಕೊಳ್ತಿದ್ದಾರೆ ಎಂದು ಹೇಳಿದರು.
ಇನ್ನೂ ಮೋದಿ ಅವರು ಒಳ್ಳೆಯ ಕ್ರೆಡಿಬಿಲಿಟಿ ಇಟ್ಕೊಂಡಿದ್ದಾರೆ. 70 ವರ್ಷ ಸ್ವಾತಂತ್ರ್ಯ ಬಂದಾಗಿನಿಂದ 10 ವರ್ಷ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾಣ್ತಿದ್ದೇವೆ. ರಾಹುಲ್ ಗಾಂಧಿ ಅಂತವರು ಬಂದ್ರೆ ಗ್ಯಾರಂಟಿ ಮೂಲಕ ಮಾತ್ರ ಅಧಿಕಾರಕ್ಕೆ ಬರಬಹುದು. ಬಿಜೆಪಿ ಸುನಾಮಿ, ಅಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕೊಚ್ಚಿ ಹೋಗುತ್ತದೆ. ಜಮ್ಮು – ಕಾಶ್ಮೀರದಲ್ಲಿ 370 ತೆಗೆದು ಹಾಕಿ ಮೋದಿ ಅವರು ಇತಿಹಾಸ ನಿರ್ಮಸಿದ್ದಾರೆ. ಬಿಜೆಪಿ 400 ಕ್ಕೂ ಅಧಿಕ ಸ್ಥಾನವನ್ನ ಸ್ವಂತ ಬಲದಿಂದ ಗೆಲ್ಲುತ್ತೇವೆ. ಬಳ್ಳಾರಿ – ವಿಜಯನಗರ ಜಿಲ್ಲೆಯಲ್ಲಿ 35 ವರ್ಷದಿಂದ ರಾಜಕಾರಣ ಮಾಡ್ತಿದ್ದೇನೆ. ರೈಲ್ವೇ ಯೋಜನೆಗಳನ್ನ ಬಳ್ಳಾರಿ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಜಾರಿ ಮಾಡಿದ್ದೇವೆ ಎಂದು ಹೇಳಿದರು.