ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಸ್ತೆಗಳ ಸಮಸ್ಯೆ ಹೇಳ ತೀರದಾಗಿದೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳದ್ದೆ ದರ್ಬಾರ್ ಎಂಬುವಂತಾಗಿದ್ದು, ಈ ರಸ್ತೆಗಳಿಗೆ ದುರಸ್ತಿಯ ಭಾಗ್ಯ ಬೇಕಾಗಿದೆ. ಹೌದು. ಇಂತಹ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಸ್ ಹಾಗೂ ವಾಹನಗಳು ಸಂಚರಿಸಲು ಕಷ್ಟಕರವಾಗಿವೆ ತೆಗ್ಗು ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಅಪಘಾತ ಸಂಭವಿಸುತ್ತಿವೆ.
ಆಧಾರ್ ಕಾರ್ಡ್ʼನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬಹುದು ಗೊತ್ತಾ..? ಇಲ್ಲಿದೆ ಮಾಹಿತಿ
ಅವುಗಳನ್ನು ನೋಡಿದ ವಾಹನ ಸವಾರರು ನಮ್ಮ ಕ್ಷೇತ್ರದಲ್ಲಿ ಶಾಸಕರು ಸಚಿವರಿಗೆ ವಾಹನ ಸವಾರರು ಈ ಮೂಲಕ ವಿನಂತಿ ಮಾಡಿಕೊಂಡರು. ಕಲಘಟಗಿ ತಾಲ್ಲೂಕಿನ ಆರೆಬಸನಕೋಪ್ಪ ಹಸರಂಬಿ ಹೋಗುವ ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೋಡಬೆಕು ಆದರೆ ಇಲ್ಲಿಯ ಅಧಿಕಾರಿಗಳು ಕನಿಷ್ಠ ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚಲು ಆಗದೆ ಇರುವ ಸ್ಥಿತಿಯಲ್ಲಿ ಬಂದಿರೋದು ವಿಪರ್ಯಾಸವಾಗಿದೆ.
ವರದಿ : ಮಾರುತಿ ಲಮಾಣಿ, ಕಲಘಟಗಿ