ಚಿಕ್ಕಬಳ್ಳಾಪುರ: ಜಗತ್ತು ಇನ್ನಷ್ಟು ಬಹುದೊಡ್ಡ ಗಂಡಾಂತರ ಎದುರಿಸಲಿದೆ ಎಂದು ಕೋಡಿ ಮಠ ಶ್ರೀಗಳು ಇಂದು ಚಿಕ್ಕಬಳ್ಳಾಪುರದಲ್ಲಿ ಭವಿಷ್ಯ ನುಡಿದಿದ್ದಾರೆ.ಮೂರು ತಿಂಗಳ ಹಿಂದೆ ಇದೇ ಜಾಗದಲ್ಲಿ ಕುಳಿತು ನಾನು ಹೇಳಿದ್ದ ಮಾತು ನಿಜವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಇದೆ ಆದರೆ ಅವರ ಧರ್ಮಪತ್ನಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಗಂಡಾಂತರವಿದೆ ಎಂದು ತಿಳಿಸಿದ್ದೆ ಅದೇ ರೀತಿ ಚಿತ್ರನಟ ದರ್ಶನ್, ಶಾಸಕ ನಾಗೇಂದ್ರ, ಮುನಿರತ್ನ ನಾಯ್ಡು ಜೈಲಿಗೆ ಸೇರಿದ್ದಾರೆ ಎಂದಿದ್ದಾರೆ. ಉಳಿದ ದಿನಗಳಲ್ಲೂ ಅಷ್ಟೇ ಬಹುದೊಡ್ಡ ಗಂಡಾಂತರ ಎದುರಾಗಲಿದೆ ಎನ್ನುವ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ವಕೀಲ ಮುನಿವೆಂಕಟಸ್ವಾಮಿ ಅವರ ನೂತನ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕೋಡಿಮಠದ ಶ್ರೀಗಳು ಆಗಮಿಸಿ ಆಶೀರ್ವದಿಸಿ ಆತಿಥ್ಯ ಸ್ವೀಕರಿಸಿದರು. ಕಾಲಜ್ಞಾನಿಗಳು ಹೇಳಿದ ಯಾವ ಭವಿಷ್ಯವೂ ಸುಳ್ಳಾಗಿಲ್ಲ ಎಂದಿರುವ ಅವರು …ಕಾಲಜ್ಞಾನಿಗಳು ಹೇಳಿದ್ದು ಯಾವೊತ್ತೂ ಸುಳ್ಳಾಗೋದಿಲ್ಲ, ಅವರು ಹೇಳಿದಂತೆ ಜಗತ್ತು ನಡೆಯುತ್ತಿದೆ. ಅವರೇಳಿದಂತೆ ಎಣ್ಣೆ ಇಲ್ಲದೇ ದೀಪ ಉರಿಯುತ್ತಿದೆ. ಕಾಲಿಲ್ಲದೆ ಕಬ್ಬಿಣದ ಚಕ್ರಗಳಿಂದ ರೈಲು ಓಡುತ್ತಿದೆ. ಗಾಳಿಯಲ್ಲಿ ಮಾತಾನಾಡೋ ಮೊಬೈಲ್ ಬಂದಿದೆ.
DRDO Recruitment: ಈ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ – ಕೈ ತುಂಬಾ ಸಂಬಳ
ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು, ನಾಯಿಗೆ ಊಟ ಕೊಡಿ ಇಲ್ಲಾಂದ್ರೆ ಅವು ನಮ್ಮನ್ನೇ ತಿಂದು ಬಿಡುತ್ತವೆ. ಮನುಷ್ಯ ಜನ್ಮ ಎಷ್ಟು ಶ್ರೇಷ್ಟವೋ ಅಷ್ಟೇ ಕೆಲಸಕ್ಕೆ ಬಾರದ್ದು, ಸಾಕಷ್ಟು ಆಸ್ತಿ ಅಂತಸ್ತು ಗಳಿಸಿದ ಸತ್ತರೆ ಆ ಶವವನ್ನು ಯಾರೂ ಮನೆಯಲ್ಲಿ ಇಟ್ಟುಕೊಳ್ಳೋದಿಲ್ಲ ಆದರೆ ನೂರು ವರ್ಷ ಬದುಕಿದ ಮರವೊಂದು ಉರುಳಿ ಬಿದ್ದರೆ ಅದು ಸತ್ತ ಮೇಲೆಯೂ ನೂರು ವರ್ಷ ಬದುಕುತ್ತೆ ಎಂದಿದ್ದಾರೆ. ಒಟ್ಟಾರೆ ಕೋಡಿ ಶ್ರೀಗಳ ಈ ಮತ್ತೊಂದು ಭವಿಷ್ಯ ರಾಜ್ಯದ ಜನರ ನಿದ್ದೆ ಕೆಡಿಸೋದಂತೂ ನಿಜ. ಇದು ರಾಜ್ಯ ರಾಜಕೀಯದ ಭವಿಷ್ಯವೋ…ದೇಶ ರಾಜಕೀಯ ಅಥವಾ ರಣತಂತ್ರದ ಭವಿಷ್ಯವೋ ಕಾದುನೋಡಬೇಕಿದೆ.