ವಿಜಯನಗರ :-ರಾಜ್ಯ ಸರ್ಕಾರ ರೈತರ ಪಾಲಿಗೆ ಸತ್ತು ಹೋಗಿದೆ ಎಂದು ಹೇಳುವ ಮೂಲಕ ಎನ್.ರವಿಕುಮಾರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಹೊಸಪೇಟೆಯಲ್ಲಿ ಮಾತನಾಡಿದ ಅವರು, ನಾವು ಶ್ರೀರಾಮನ ಪೂಜಾರಿಗಳು, ವ್ಯಾಪಾರಿಗಳಲ್ಲಾ. ಕಾಂಗ್ರೆಸ್ ನವರಿಗೆ ವ್ಯಾಪಾರ ಗೊತ್ತು ಎಂದು ಜೈರಾಮ್ ರಮೇಶ್ ಗೆ ಇದೇ ವೇಳೆ ಟಾಂಗ್ ಕೊಟ್ಟಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
Kalaburgi: ನಾಳೆ ಕೈ ಅಭ್ಯರ್ಥಿ ನಾಮಿನೇಷನ್….ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಜ್ಜು
ಬರ, ಮೇವಿಲ್ಲ, ರೈತರ ಪರಿಸ್ಥಿತಿ ಅರಣ್ಯ ರೋಧನವಾಗಿದೆ. ರಾಜ್ಯ ಸರಕಾರ ಕೇಂದ್ರ ಸರಕಾರದ ವಿರುದ್ಧ ದೂರುವುದನ್ನು ಬಿಟ್ಟರೆ ರೈತರ ಪಾಲಿಗೆ ಸತ್ತು ಹೋಗಿದೆ. ರಾಜ್ಯ ಸರಕಾರ ಕೂಡಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. 2 ಸಾವಿರ ಮಾತ್ರ ಕೊಟ್ಟಿದ್ದಾರೆ, ಇದು ಯಾವುದಕ್ಕೂ ಸಾಲಲ್ಲ, ಎಕರೆಗೆ ಇಂತಿಷ್ಟು ಪರಿಹಾರ ಕೊಡಬೇಕು. ರಾಜ್ಯ ಸರಕಾರ ಕೋರ್ಟ್ ಗೆ ಹೋಗಿರುವುದು, ರೈತರಿಗೆ ಪರಿಹಾರ ಕೊಡಲಾಗಲ್ಲ ಅಂತಾನೊ ಅಥವಾ ಕೇಂದ್ರ ಸರಕಾರ ಕೊಡ್ತಿಲ್ಲ ಅಂತಾನೋ ಜನರಿಗೆ ಉತ್ತರಿಸಿ. ಶಾಸಕರೇ ಸರಕಾರ ಅನುದಾನ ಕೊಡ್ತಿಲ್ಲ ಅಂತ ದೂರುತ್ತಿದ್ದಾರೆ. ೇಂದ್ರವನ್ನು ದೂರುವುದರಿಂದ ಯಾವುದೇ ಲಾಭವಿಲ, ಜನರು ಶಾಪ ಹಾಕುತ್ತಿದ್ದಾರೆ. 93 ಕ್ಯಾಬಿನೆಟ್ ದರ್ಜೆಯವರಿದ್ದಾರೆ. ಈ ಸರಕಾರ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿದೆ
ವಿಶೇಷ, ವಿಮಾನ, ಬಂಗಲೆ, ರಿಪೇರಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದೀರಿ. ರೈತರಿಗೆ ಪರಿಹಾರ ಕೊಡಲು ಇಲ್ವಾ-? ಎಂದು ಪ್ರಶ್ನಿಸಿದರು. ಸುಪ್ರಿಂ ಕೋರ್ಟ್ ತೀರ್ಪು ಯಾವಾಗದರೂ ಬರಲಿ, ಮೊದಲು ಪರಿಹಾರ ಕೊಡಲಿ. ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಪಾಳಮೋಕ್ಷ ಮಾಡಲಿದ್ದಾರೆ ಎಂದರು.
ಇನ್ನೂ ದಿಂಗಾಲೇಶ್ವರ ಶ್ರೀಗಳು ಆರೋಪ ಯಾಕೆ ಗೊತ್ತಿಲ್ಲ, ನಮ್ಮ ಪಕ್ಷ ಲಿಂಗಾಯತರ ಪರವಾಗಿದೆ. ಲಿಂಗಾಯತರಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ನ್ಯಾಯ ಒದಗಿಸುವ ಕೆಲಸ ಮಾಡಿದೆ, ಸಿಎಂ ಆಗಿದ್ದಾರೆ. ಅವರು ಖುಷಿಯಿಂದ ಬಿಜೆಪಿ ಬೆಂಬಲಿಸಬೇಕಿತ್ತು. ಚುನಾವಣೆ ಸ್ಪರ್ಧೆಗೆ ಎಲ್ಲರಿಗೂ ಹಕ್ಕಿದೆ ಆದರೆ, ಈಗಲೂ ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.
ನಾವು ವ್ಯಾಪಾರಿಗಳಲ್ಲ, ಶ್ರೀರಾಮನ ಅಪ್ಪಟ ಪೂಜಾರಿಗಳು, ವ್ಯಾಪಾರ ಮಾಡೋದೆ ಇಲ್ಲ. ಹಿಂದು ಧರ್ಮದಲ್ಲಿ ಈ ಪದ ಅಪ್ರಸ್ತುತ
ಸಮಾಜಕ್ಕೆ ಒಳ್ಳೆಯದಾಗಲಿ ಶಾಂತಿನೆಲೆಸಲಿ ಅಂತ ಮಾಡುತ್ತಿದ್ದೇವೆ. ಕಾಂಗ್ರೆಸ್ ನವರು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಳಾಗಿರುವುದನ್ನು ಜೈ ರಾಂ ರಮೇಶ್ ಅವಲೋಕನ ಮಾಡಬೇಕು
ಅವರೇ ವ್ಯಾಪಾರಿಗಳು. ವ್ಯಾಪಾರ ಅಂದರೆ ಕಾಂಗ್ರೆಸ್ ನವರು ಎಂದು ಎನ್ ರವಿಕುಮಾರ್ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)