ಕಲಘಟಗಿ:- ತಾಲೂಕಿನ ಗಳಿಗೆಹುಲುಕೋಪ್ಪ ಗ್ರಾಮದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಳಾದ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರ ಸಭೆಯನ್ನು ಕೈಗೊಂಡರು. ಪ್ರಚಾರ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Shivakumar: ಪ್ರಜ್ವಲ್ ರೇವಣ್ಣ ಅವರ ಕಾಮ ಪುರಾಣದ ವಿಡಿಯೋ ನೋಡಿದ್ದೇನೆ – ಡಿಕೆಶಿ
ರಾಜ್ಯ ಸರ್ಕಾರದ ಐದು ಯೋಜನೆಗಳಿಂದ ರಾಜ್ಯ ಸರ್ಕಾರವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿ ಇಲ್ಲಿವರೆಗೂ ಅಭಿವೃದ್ಧಿಯಾಗಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಭಾರತ ಇಂದು ಆರ್ಥಿಕತೆಯಲ್ಲಿ ಮೂರನೆ ಸ್ಥಾನದಲ್ಲಿದೆ. ಅತ್ಯಂತ ಪ್ರಬಲ ರಾಷ್ಟ್ರವಾಗಿ ಭಾರತ ದೇಶ ಹೊರಹೂಮ್ಮಿದೆ. ರೈತರ ಖಾತೆಗೆ ನೇರವಾಗಿ ಆರು ಸಾವಿರ ರೂಪಾಯಿಗಳು ರೈತರಿಗೆ ನೀಡಿದೆ. ಅಂದು ದೇಶದಲ್ಲಿ ಶ್ರೀಮತಿ ಇಂದಿರಾಗಾಂಧಿ ಪ್ರಧಾನಮಂತ್ರಿ ಇದ್ದಾಗ 50 ರೂಪಾಯಿ ಮಾಸಿಕ ಪಿಂಚಣಿ ಇತ್ತು. ಅದು ದೆಹಲಿಯಿಂದ ನೇರವಾಗಿ ಫಲಾನುಭವಿಗೆ ಮುಟ್ಟಬೇಕಾದರೆ ಫಲಾನುಭವಿಗೆ ಸಿಗುವ ಮೊತ್ತ 40 ರೂಪಾಯಿ ಆಗಿತ್ತು. 50 ವರ್ಷ ದೇಶ ಆಳಿದರು ದೇಶವನ್ನು ಅದೋಗತಿಯತ್ತ ಸಾಗಿದ ಕೀರ್ತಿ ಇದ್ದರೆ ಅದು ಕಾಂಗ್ರೆಸ್ ಸರ್ಕಾರದ ಕೀರ್ತಿ ಎಂದು ಕಿಡಿಕಾರಿದರು. ನಾನು 1999 ರಲ್ಲಿ ಕೇಂದ್ರ ಸಚಿವ ನಿದ್ದಾಗ ಗ್ಯಾಸ್ ಸಿಲೆಂಡರ್ ಸಿಗುವುದು ಬಹಳ ಕಷ್ಟವಾಗಿತ್ತು. ಇಂದು ಪ್ರತಿ ಕುಟುಂಬಗಳಿಗೆ ಉಜ್ವಲ ಯೋಜನೆ ಮುಖಾಂತರ ಪ್ರತಿ ಬಡ ಕುಟುಂಬಕ್ಕೂ ಗ್ಯಾಸ್ ಸಿಲೆಂಡರ್ ನೀಡಿದ್ದಾರೆ. ಮಾನ್ಯ ನರೇಂದ್ರ ಮೋದಿ ಅವರು ಒಂದು ಮಾತನ್ನು ಹೇಳಿದ್ದಾರೆ.
ನನ್ನ ದೇಶವನ್ನು ಯಾರ ಮುಂದೆ ತಲೆ ಬಾಗಿಸುವಂತ ಕೆಲಸ ಮಾಡುವುದಿಲ್ಲ ನಿಮಗೆ ಅಗೋರವ ಸಿಗುವಂತ ಕೆಲಸವನ್ನು ಮಾಡುವುದಿಲ್ಲ ಎಂದಿದ್ದಾರೆ. ಅದಕ್ಕೋಸ್ಕರ ದೇಶದ ಅಭಿವೃದ್ಧಿಗಾಗಿ ಮೂರನೇ ಅವಧಿಗೆ ಅವರನ್ನು ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಒಂದಾಗಿ ಶ್ರಮವಹಿಸೋಣ ತಾಲೂಕಿನ ಮತದಾರರ ಪಾತ್ರ ಬಹಳ ಮುಖ್ಯವಾಗಿದೆ. ಸಂವಿಧಾನದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸವಿಧಾನದಲ್ಲಿ ಪ್ರತಿ 10 ವರ್ಷಕ್ಕೆ ನೋಟ್ ಬ್ಯಾನ್ ಮಾಡುವುದಾಗಿ ಬರೆದಿದ್ದಾರೆ. ಈ ಹಿಂದೆ ದೇಶದಲ್ಲಿ ನೋಟ್ ಬ್ಯಾನ್ ಮಾಡಿದ್ದೀವಿ ಅದರಿಂದ ಭಾರತಕ್ಕೆ ತೊಂದರೆಯಾಗಿಲ್ಲ ಸಾಕಷ್ಟು ಕೋಟ ನೋಟ್ ಬಂದಿತ್ತು ನೋಟು ಅಮಾನ್ಯ ಪರಿಸ್ಥಿತಿಯಿಂದ ಪಾಕಿಸ್ತಾನ ಇಂದು ದಿವಾಳಿ ಯಾಗಿದೆ. ನಮ್ಮ ದೇಶದಲ್ಲಿ ಗರಿಬಿ ಕಲ್ಯಾಣ ಯೋಜನೆಯಿಂದ ನಿರಂತರವಾಗಿ ಬಡ ಜನರಿಗೆ 5 ಕೆಜಿ ಅಕ್ಕಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್. ಉಜ್ವಲ್ ಯೋಜನೆ. ರಾಜ್ಯದಲ್ಲಿ ರಸ್ತೆ ಸುಧಾರಣೆ. ಹೆದ್ದಾರಿಗಳು ಮೇಲ್ದರ್ಜೆಗೆ ಅನೇಕ ಕೆಲಸಗಳನ್ನು ನಮ್ಮ ರಾಜ್ಯಕ್ಕೆ ನೀಡಿದ್ದಾರೆ. ಅಬುದಾಬಿ ಎಲ್ಲಿ 1.50.0000 ಸಾವಿರ ಕೋಟಿಯಲ್ಲಿ ಲಕ್ಷ್ಮೀನಾರಾಯಣ ದೇಗುಲ ಸ್ಥಾಪನೆ ಮಾಡಿದ್ದಾರೆ.
ಅಲ್ಲಿನ ರಾಜರನ್ನು ಕರೆಸಿ, ಉದ್ಘಾಟನೆ ನೆರವೇರಿಸಿದ್ದಾರೆ. ಅದು ನಿಜವಾದ ನಮ್ಮ ದೇಶದ ತಾಕತ್ತು ಎಂದರು.ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಚಬ್ಬಿ. ವಿಧಾನ ಪರಿಷತ್ ಸದಸ್ಯರಾದ ಎಸ್ ವಿ. ಸಂಕನೂರ್. ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ. ತಾಲೂಕ ಅಧ್ಯಕ್ಷರಾದ ಬಸವರಾಜ್ ಶರೇವಾಡ. ಈರಣ್ಣ ಜಡ್ಡಿ. ಐಸಿ. ಗೋಕುಲ್. ಅಶೋಕ್ ಗುಮ್ಮಗೋಳ.ಈರಯ್ಯ ಸಿದ್ದಾಪುರ ಮಠ. ಲಕ್ಷ್ಮಣ ಪವರ್. ಸುರೇಶ್ ಶೀಲವಂತ. ಮಾಂತೇಶ್ ತಸಿಲ್ದಾರ್. ಕಿರಣ್ ಪಾಟೀಲ್ ಕುಲಕರ್ಣಿ. ಮದನ್ ಕುಲಕರ್ಣಿ. ಅಣ್ಣಪ್ಪ ಓಲೆಕಾರ್. ಗುರು ದಾನೆನವರ್. ಚಂದ್ರು ಗೌಡ ಪಾಟೀಲ್. ಆನಂದ್ ಚಿಕ್ಕಣ್ಣವರ್. ಕಲ್ಲಪ್ಪ ಪುಟ್ಟಪ್ಪನವರ್. ಎಸ್ ಆರ್ ರಾಯನಾಳ. ರುದ್ರಯ್ಯ ಚಿಕ್ಕ ಮಠ.ರವಿ ಕಾಮಧೇನು. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕ್ ಪಂಚಾಯಿತಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.