ಮಂಡ್ಯ :- ಆಸ್ತಿ ವಿಚಾರವಾಗಿ ಜನ್ಮ ಕೊಟ್ಟ ತಂದೆಯ ತಲೆ ಮೇಲೆ ಕಲ್ಲು ಎತ್ತಾಕ್ಕಿ ಮಗ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯದ ಸುಂಡಳ್ಳಿ ಗ್ರಾಮದಲ್ಲಿ ಜರುಗಿದೆ.
65 ವರ್ಷದ ನಂಜಪ್ಪ 65 ಮೃತ ವ್ಯಕ್ತಿ ಎನ್ನಲಾಗಿದೆ. ಮಹದೇವ ತಂದೆಯನ್ನೆ ಹತ್ಯೆ ಮಾಡಿದ ಮಗ ಎಂದು ಹೇಳಲಾಗಿದೆ. ಮೃತ ನಂಜಪ್ಪ ಮಗಳ ಹೆಸ್ರಿಗೆ ಆಸ್ತಿ ಬರೆದುಕೊಟ್ಟಿದ್ದ. ಹೀಗಾಗಿ ಆಸ್ತಿ ಕೊಡಲಿಲ್ಲವೆಂದು ಮಗ ಆಕ್ರೋಶಗೊಂಡಿದ್ದ.
ಹೀಗಾಗಿ ಇಂದು ಬೆಳಗ್ಗಿನ ಜಾವ ರಸ್ತೆಯಲ್ಲಿ ಒಡಾಡಿಸಿಕೊಂಡು ಹತ್ಯೆ ಮಾಡಿದ್ದಾನೆ. ಅಡ್ಡ ಬಂದ ತಾಯಿ ಮಹದೇವಮ್ಮಳಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ಹತ್ಯೆ ಬಳಿಕ ಮಗ ಮಹದೇವ ಎಸ್ಕೇಪ್ ಆಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಮಂಡ್ಯ ಮಿಮ್ಸ್ ಶವಾಗಾರಕ್ಕೆ ಮೃತ ದೇಹ ಶಿಫ್ಟ್ ಮಾಡಲಾಗಿದೆ.