ನವದೆಹಲಿ:- ಕಾಂಗ್ರೆಸ್ ನವರ ಆಟ ದೇಶದ ಜನರಿಗೆ ಗೊತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೆಸೇಜ್ ಟ್ರೇಸಿಂಗ್ಗೆ ಬಲವಂತ ಪಡಿಸಿದರೆ ದೇಶ ಬಿಟ್ಟು ಹೋಗ್ತೆವೆ – ವಾಟ್ಸ್ಆ್ಯಪ್ ಎಚ್ಚರಿಕೆ..!
ಈ ಸಂಬಂಧ ಮಾತನಾಡಿದ ಅವರು,25 ವರ್ಷಗಳ ಈ ರಾಜಕೀಯ ಜೀವನದಲ್ಲಿ ಸರ್ಕಾರದ ಮುಖ್ಯಸ್ಥನಾಗಿ ಎಲ್ಲರಿಗಿಂತ ಹೆಚ್ಚು ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ನನಗೆ ಕಪ್ಪು ಕಲೆ ಉಂಟುಮಾಡಲು ಅನೇಕರು ಪ್ರಯತ್ನಿಸಿದರು. ಆದರೆ, ಒಂದೂ ಕಪ್ಪು ಚುಕ್ಕಿ ನನಗೆ ಅಂಟಿಲ್ಲ. ಎಲ್ಲರಿಗಿಂತ ಹೆಚ್ಚು ಸಮಯದವರೆಗೂ ಜನರ ಸೇವೆ ಮಾಡಲು ಪುಣ್ಯ ನನಗೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಫಲಪ್ರದವಾಗುವುದಿಲ್ಲ. ದೇಶದ ಜನರು ತುಂಬಾ ತಿಳಿವಳಿಕೆ ಉಳ್ಳವರಾಗಿದ್ದಾರೆ. ಕಾಂಗ್ರೆಸ್ನವರ ಪ್ರತಿಯೊಂದು ಆಟವನ್ನೂ ಅವರು ಬಲ್ಲವರಾಗಿದ್ದಾರೆ. ಅವರು ಐದು ಗ್ಯಾರಂಟಿ ತರಲಿ, 25 ಗ್ಯಾರಂಟಿ ತರಲಿ, 75 ಗ್ಯಾರಂಟಿ ತರಲಿ ಜನರ ಮನಸಿನಲ್ಲಿ ಜಾಗ ಪಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆಯನ್ನು ನೋಡೋದಾದ್ರೆ ಪೂರ್ತಿ ದೇಶದಲ್ಲಿ ನೋಡ್ತಾ ಇದ್ದೀನಿ ನಾನು. ಲೋಕಸಭೆ ಚುನಾವಣೆ ರಾಜ್ಯಗಳ ರಾಜನೀತಿಗಿಂತ ಹೆಚ್ಚು ಮೇಲಸ್ತರಕ್ಕೆ ಹೋಗಿದೆ. ಇದು ಒಳ್ಳೆಯ ಲಕ್ಷಣ ಎಂದು ನಾನು ನಂಬುತ್ತೇನೆ. ಇದನ್ನ ನಾನು 2019ರಲ್ಲೂ ನೋಡಿದ್ದೇನೆ. 2014 ಮತ್ತು 2019ರ ಚುನಾವಣೆಯಲ್ಲಿ ಕೆಲ ರಾಜ್ಯಗಳಲ್ಲಿ ಸ್ಥಿತಿ ಕಡಿಮೆ ಇತ್ತು. 2024ರಲ್ಲಿ ದೇಶದ ಜನರ ಮನಸು ದೇಶಕ್ಕಾಗಿ ಚುನಾವಣೆ, ದೇಶದ ಭವಿಷ್ಯಕ್ಕಾಗಿ ಚುನಾವಣೆ, ಲೋಕಸಭೆಗಾಗಿ ಚುನಾವಣೆ, ಪ್ರಧಾನ ಮಂತ್ರಿ ಯಾರು ಆಗ್ತಾರೆ ಅದಕ್ಕಾಗಿ ಚುನಾವಣೆ ಎಂಬುದರ ಬಗ್ಗೆ ಕೇಂದ್ರಿಕೃತವಾಗಿದೆ. ಇದರಿಂದ ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಮಸ್ಯೆ ಆಗಿದೆ. ಅವರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯ ಹೆಸರನ್ನೇ ಹೇಳಲು ಆಗುತ್ತಿಲ್ಲ. ಇದರಿಂದ ಜನರು ಯಾರ ಮುಖ ನೋಡಿ ಮತ ಹಾಕುತ್ತಾರೆ? ಒಂದೊಂದು ವರ್ಷ ಒಬ್ಬೊಬ್ಬರು ಪ್ರಧಾನಿ ಆಗುತ್ತಾರೆ ಎಂದು ಹೊಸ ಆಟವಾಡುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿ ಹೇಗೆ ಆಗುತ್ತದೆ? ಇವರು ದೇಶದ ಇಷ್ಟೊಂದು ಮಹತ್ವಪೂರ್ಣ ಚುನಾವಣೆಯಲ್ಲಿ, ಇಷ್ಟೊಂದು ದೊಡ್ಡ ಚುನಾವಣೆಯಲ್ಲಿ ಭಾಷಣ ಮಾಡೋದಕ್ಕೆ, ಸುಳ್ಳು ಹೇಳೋ ಆಟ ಮಾಡಿಕೊಂಡಿದ್ದಾರೆ ಎಂದು ಮೋದಿ ಹರಿಹಾಯ್ದಿದ್ದಾರೆ.