ಚಾಮರಾಜನಗರ: ಇಂದು ಮುಂಜಾನೆ ವೇಳೆಯಲ್ಲಿ ಪತ್ರಕರ್ತ ರಾ.ಬಾಬು ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಚಾಮರಾಜನಗರ ತಾಲೂಕಿನ ರಾಮಸಮುದ್ರ ಗ್ರಾಮದಿಂದ ದೊಡ್ಡಕೆರೆಗೆ ತೆರಳುವ ಮಾರ್ಗಮದ್ಯೆ ಇರುವ ಜಮೀನಿನ ಕಬ್ಬಿನ ಗದ್ದೆಯಲ್ಲಿ ಭಾರೀ ಗಾತ್ರದ ಚಿರತೆಯು ಪ್ರತ್ಯಕ್ಚಗೊಂಡಿದೆ. ಈ ವೇಳೆ ನವಿಲನ್ನು ಕೊಂದು ಪರಾರಿಯಾಗಿದೆ.
ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಹಂದಿ ಭೇಟೆಯಾಡಲು ಹೊಂಚು ಹಾಕಿ ಕುಳಿತಿತ್ತು ಈ ವೇಳೆ ಸಿಕ್ಕ ನವಿಲನ್ನು ಕೊಂದು ಹಾಕಿದೆ.
ಮುಂಜಾನೆ 6 ಗಂಟೆಯಲ್ಲಿ ಎಂದಿನಂತೆ ಜಮೀನಿಗೆ ತೆರಳಿದ್ದ ರೈತ ವೆಂಕಟಾಚಲ ನಾಯಕರ ಕಣ್ಣಿಗೆ ಚಿರತೆ ಕಂಡು ಬಂದಿದೆ.
ಕೂಡಲೆ ಸಮೀಪದ ರೈತರ ಬಳಿ ತಿಳಿಸುವಷ್ಟರಲ್ಲಿ ಚಿರತೆ ಓಡಿ ಹೋಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಈ ಭಾಗದಲ್ಲಿ 2 ಚಿರತೆಗಳು ಸಂಚರಿಸುತ್ತಿದ್ದು ರಾತ್ರಿ ವೇಳೆ ಜಮೀನು ಕಾಯುವ ರೈತರಲ್ಲಿ ಆತಂಕ ಸೃಷ್ಟಿಸಿದೆ ಕೂಡಲೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಚಿರತೆ ಸೆರೆಗೆ ಬೋನು ಅಳವಡಿಸುವಂತೆ ಈ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.