ದತ್ತನ ದರ್ಶನಕ್ಕೆ ಬಂದಿದ್ದ ಭಕ್ತನೊಬ್ಬ ಬರ್ಬರವಾಗಿ ಹತ್ಯೆಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಅಫಜಲಪುರ ತಾಲೂಕಿನ ಪುಣ್ಯಕ್ಷೇತ್ರ ಗಾಣಗಾಪುರದಲ್ಲಿ ಘಟನೆ ನಡೆದಿದ್ದು 28 ವರ್ಷ ಮಹೇಶ್ ಬರ್ಬರವಾಗಿ ಕೊಲೆಯಾದ ದುರ್ದೈವಿ ಅಂತ ಗುರುತಿಸಲಾಗಿದೆ..
ಮಹಾರಾಷ್ಟ್ರದ ಪುಣೆಯಿಂದ ದತ್ತನ ದರ್ಶನಕ್ಕೆ ಆಗಮಿಸಿದ್ದ ಮಹೇಶ್ ಗಾಣಗಾಪುರದ ಸಂಗಮದ ಪಕ್ಕದಲ್ಲಿನ ಜಮೀನಿನಲ್ಲಿ ಕೊಲೆಯಾಗಿದ್ದಾನೆ..ಕಳೆದ ಎರಡು ತಿಂಗಳಿಂದ ಊರು ಬಿಟ್ಟಿದ್ದ ಮಹೇಶ್ ಮನೆಯ ಯಾರೊಬ್ಬರಿಗೂ ಸಹ ಹೇಳದೆ ಊರೂರು ಅಲೆದಾಡ್ತಿದ್ದ ಎನ್ನಲಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ವಿಪರ್ಯಾಸ ಅಂದ್ರೆ ಗುರುದತ್ತನ ದರ್ಶನಕ್ಕೆ ಬಂದಾಗ ಮೊನ್ನೆ ಗಾಣಾಗಪುರಕ್ಕೆ ಬಂದಿರೋದಾಗಿ ಹೇಳಿದ್ದನಂತೆ. ಆದ್ರೆ ಕೊಲೆಗೆ ಕಾರಣ ತಿಳಿದುಬಂದಿಲ್ಲ.ಕೇಸ್ ದಾಖಲಿಸಿಕೊಂಡ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ..
![](https://ainlivenews.com/wp-content/uploads/2024/01/Ad-Banner-copy-scaled.jpg)