ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ ತುಂಡು ತುಂಡಾಗಿ ಕತ್ತರಿಸಿ ಹತ್ಯೆಯಾಗಿರುವ ವೃದ್ಧೆ ಬಿಜೆಪಿಯ ಕಾರ್ಯಕರ್ತೆ ಎಂಬುದಾಗಿ ಬಯಲಾಗಿದೆ.
ಪೊಲೀಸರ ಮುಂದೆ ಕೊನೆಗೂ ತಾನೇ ಕೊಲೆ ಮಾಡಿದೆ ಅಂತ ಒಪ್ಪಿಕೊಂಡ ಆರೋಪಿ ದಿನೇಶ್ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತುಂಡು ತುಂಡಾಗಿ ಕತ್ತರಿಸಿದ ದಿನೇಶ್ ಸುಮಾರು 30 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ಆರೋಪಿ ನಾಲ್ಕು ವರ್ಷಗಳ ಹಿಂದೆ ಮರ್ಚಂಟ್ ಆಗಿ ಕೆಲಸ ಮಾಡ್ತಾ ಇದ್ದ ಬಳಿಕ ಅಲ್ಲಿ ಕೆಲಸ ಬಿಟ್ಟು ಕೆ.ಆರ್ ಪುರಂನಲ್ಲಿ ಮನೆಮಾಡಿಕೊಂಡಿದ್ದ
![Demo](https://ainlivenews.com/wp-content/uploads/2023/12/spoorthi-1.jpg)
ಬೆಂಗಳೂರಿಗರೇ ಗಮನಿಸಿ… ಫೆಬ್ರವರಿ 27, 28ರಂದು ಎರಡು ದಿನ ನೀರು ಪೂರೈಕೆಯಲ್ಲಿ ಸ್ಥಗಿತ!
ಇತ್ತೀಚೆಗೆ ಸಾಲಗಾರರ ಕಾಟ ಜಾಸ್ತಿಯಾಗಿದ್ದು ಮನೆಯ ಬಳಿ ಬರ್ತಾ ಇದ್ರು ಇತ್ತೀಚೆಗೆ ಅಜ್ಜಿ ಆಸ್ತಿಯನ್ನು ಮಾರಾಟ ಮಾಡಿದ್ದು ಕೋಟ್ಯಾಂತರ ಹಣ ಬಂದಿತ್ತು ಹೀಗಾಗಿ ಅಜ್ಜಿಯ ಬಳಿ ಹಣವನ್ನು ಕೇಳಿದ್ದ ದಿನೇಶ್ ಹಣ ಕೊಡಲು ನಿರಾಕರಿಸಿದ್ದಕ್ಕೆ ಅಜ್ಜಿಯ ಮೈಮೇಲಿದ್ದ ಚಿನ್ನಾಭರಣದ ಮೇಲೆ ಕಣ್ಣಾಕಿದ್ದ ಆರೋಪಿ
ಹೀಗಾಗಿ ಅಜ್ಜಿಯನ್ನು ಮನೆಗೆ ಕರೆಸಿ ಉಸಿರುಗಟ್ಟಿಸಿ ಕೊಲೆ ಬಳಿಕ ಮೈಲೇಲಿದ್ದ ಚಿನ್ನಾಭರಣ ದೋಚಿದ್ದ ಆರೋಪಿ ಆದ್ರೆ ಕಿವಿಯ ಓಲೆ ಬಿಟ್ಟರೇ ಉಳಿದಿದ್ದೆಲ್ಲ ರೋಲ್ಡ್ ಗೋಲ್ಡ್ ಆಗಿತ್ತು ಕೊನೆಗೆ ಕಿವಿ ಓಲೆಯ ಅಡವಿಟ್ಟು ಹಣ ಪಡೆದು ಅದರಲ್ಲಿ ಡ್ರಮ್ ಖರೀದಿ ಮಾಡಿದ್ದ
ಇತ್ತೀಚೆಗೆ ಕೆಲಸ ಇಲ್ಲದೆ ರಾಜಕೀಯದಲ್ಲಿ ಭಾಗಿಯಾಗಲು ಯತ್ನಿಸಿದ್ದ ಪಕ್ಷವೋಂದರ ಕಾರ್ಯಕರ್ತನಾಗಿ ಗುರ್ತಿಸಿಕೊಂಡಿದ್ದ ಆರೋಪಿ
ಮೃತ ಸುಶೀಲಮ್ಮ (76) ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಬೆಂಗಳೂರಿಗೆ ಬಂದು ನೆಲೆಸಿದ್ದರು. ಆಸ್ತಿ ಮಾರಾಟದಿಂದ ಬಂದಿದ್ದ ಹಣದಲ್ಲಿ ಮನೆಯನ್ನ ಲೀಸ್ ಗೆ ಪಡೆದು ವಾಸವಿದ್ದರು. ಸುಶೀಲಮ್ಮಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದಾನೆ. ಆದರೆ ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಸುಶೀಲಮ್ಮ ಕಿರಿಯ ಪುತ್ರಿ ಕೂಡ ಅದೇ ಕಟ್ಟಡದಲ್ಲಿ ವಾಸವಾಗಿದ್ದರು. ಪುತ್ರ ಪ್ರತೀ ತಿಂಗಳು ತಾಯಿಗೆ 2 ರಿಂದ 3 ಸಾವಿರ ಹಣವನ್ನು ನೀಡುತ್ತಿದ್ದನು.
ಇತ್ತ ಸುಶೀಲಮ್ಮ ಅವರು ಕೆಲವೊಮ್ಮೆ ಮನೆಯಿಂದ ಹೋದ್ರೆ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಹೀಗಾಗಿ ಮಕ್ಕಳು ಕೂಡ ಅಷ್ಟೊಂದು ತಲೆ ಕೆಡಿಸಿಕೊಂಡು ಹುಡುಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಜ್ಜಿ ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ
ಬೆಳಕಿಗೆ ಬಂದಿದ್ದು ಹೇಗೆ..?: ನಿಸರ್ಗ ಲೇಔಟ್ನ ಮನೆಗಳ ಓಣಿಯಲ್ಲಿ 2 ದಿನಗಳಿಂದ 10 ಲೀಟರ್ ಸಾಮರ್ಥ್ಯದ ಡ್ರಮ್ ಒಂದು ಅನಾಥವಾಗಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಭಾನುವಾರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಡ್ರಮ್ ಒಳಗೆ ವೃದ್ಧೆಯ ಮೃತದೇಹ ಇರುವುದು ಬಯಲಾಗಿದೆ. ಅಲ್ಲದೇ ಈ ಕೊಲೆಯ ಹಿಂದೆ ಪರಿಚಿತರ ಕೈವಾಡ ಶಂಕೆ ವ್ಯಕ್ತಪಡಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)