ಮೂಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಹೋರಾಟಕ್ಕಿಳಿದಿವೆ.ಇತ್ತ ಪ್ರತಿಪಕ್ಷಗಳ ವಿರುದ್ಧ ಕಾಂಗ್ರೆಸ್ ಕೂಡ ಜನಾಂದೋಲನ ರೂಪಿಸಿದೆ. ಮುಡಾ ಹಗರಣದ ದಾಖಲೆ ಕೊಟ್ಟಿದ್ದು ಡಿಕೆಶಿ ಎಂದು ಹೆಚ್ಡಿಕೆ ಗಂಭೀರ ಆರೋಪ ಮಾಡಿದ್ದಾರೆ.ನಮ್ಮ ಪಾದಾಯತ್ರೆ ಮುಗಿಯುವ ವೇಳೆಗೆ ಸರ್ಕಾರ ಬೀಳಲಿದೆ ಎಂದು ಪ್ರತಿಪಕ್ಷಗಳು ಭವಿಷ್ಯ ನುಡಿದಿದ್ದಾರೆ.
ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ಕೊಡುತ್ತಿದ್ದಂತೆ ಮೂರು ಪಕ್ಷದಲ್ಲೂ ಸಂಚಲನ ಸೃಷ್ಟಿ ಮಾಡಿದೆ.ಮುಡಾ ಹಗರಣದಲ್ಲಿ ಮುಖ್ಖಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಇಂದಿನಿಂದ ಮೈಸೂರು ಚಲೋ ಶುರು ಮಾಡಿದ್ದಾರೆ.ಇತ್ತ ಆಡಳಿತರೂಢ ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿ-ಜೆಡಿಎಸ್ ವಿರುದ್ಧ ಜನಾಂದೋಲನ ಸಭೆ ಮಾಡುವ ಮೂಲಕ ಬಿಜೆಪಿ-ಜೆಡಿಎಸ್ ಗೆ ಟಕ್ಕರ್ ಕೊಡುತ್ತಿದೆ.ಈ ಹಿನ್ನಲೆಯಲ್ಲಿ ಮುಡಾ ಪ್ರರಕಣದ ಹೋರಾಟ ಕ್ಲೈಮಾಕ್ಸ್ ಹಂತ ತಲುಪಿದೆ..
ಅಬ್ಬಬ್ಬಾ! ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಹಿಡಿದು 150 ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ ಈ ʼʼಕಾಡು ಬಸಳೆʼʼ
-ರಾಜ್ಯದಲ್ಲಿ ಮುಡಾ ಹಗರಣ ಬೆಳಕಿಗೆ ಬಂದಿದ್ದು,ಸಿಎಂ ಕುರ್ಚಿ ಮೇಲೆ ಟವಲ್ ಹಾಕಿದ ವ್ಯಕ್ತಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಳೆದ ವಾರವಷ್ಟೇ ಹೇಳಿಕೆ ನೀಡಿದ್ದರು.ಇವತ್ತು ನೇರವಾಗಿಯೇ ಮುಡಾ ಹಗರಣದ ದಾಖಲೆ ನೀಡಿದ್ದೇ ಡಿ.ಕೆ.ಶಿವಕುಮಾರ್ ಎಂದು ಹೆಚ್ ಡಿ ಕೆ ಗಂಭೀರ ಆರೋಪ ಮಾಡಿದ್ದಾರೆ.ಇನ್ನು ಈ ಪಾದಯಾತ್ತೆ ಮುಗಿಯ ವೇಳಗೆ ಸರ್ಕಾರ ಇರೋತ್ತೋ ಇಲ್ವೋ ಎಂದು ಗೊತ್ತಿಲ್ಲ ಬಿಜೆಪಿ-ಜೆಡಿಎಸ್ ನಾಯಕರು ಭವಿಷ್ಯ ನುಡಿದಿದ್ದಾರೆ.