ಕೊಪ್ಪಳ:- ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗುಟ್ಕಾ ತಂದು ಕೊಡದ ಕಾರಣ ಪಕ್ಕದ ಮನೆಯ ವ್ಯಕ್ತಿ ಬಾಲಕಿ ಕೊಲೆ ಮಾಡಿದ್ದು, ಎರಡು ತಿಂಗಳ ಬಳಿಕ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಬೇರೆ ರಾಜ್ಯಕ್ಕೆ ಹೋಲಿಸಿ ನಮ್ಮಲ್ಲಿ ಪೆಟ್ರೋಲ್-ಡೀಸೆಲ್ ಏರಿಸಿದ್ದೀರಾ!? -ಶೆಟ್ಟರ್ ಟಾಂಗ್..!
ಸಿದ್ದಲಿಂಗಯ್ಯ ನಾಯ್ಕಲ್ (51) ಎಂಬಾತನಿಂದ ಕೊಲೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಅನುಶ್ರಿ (07)ಕೊಲೆಯಾದ ಬಾಲಕಿ ಎನ್ನಲಾಗಿದೆ. ಎಪ್ರಿಲ್ 18 ರಂದು ಮದ್ಯಾನ ಬಾಲಕಿ ನಾಪತ್ತೆಯಾಗಿದ್ದಳು. ಎಪ್ರೀಲ್ 20 ರಂದು ಕೊಪ್ಪಳ ಮಹಿಳಾ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಎಪ್ರೀಲ್ 21 ರಂದು ಬಾಲಕಿ ಶವ ಪತೆಯಾಗಿತ್ತು. ಬಾಲಕಿ ಶವ ಪತ್ತೆ ಹಿನ್ನೆಲೆ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು
ಸಾಕ್ಷಿ ಸಿಗದಂತೆ ಬಾಲಕಿಯ ಶವವನ್ನ ಗೊಬ್ಬರ ಚೀಲದಲ್ಲಿ ಕಟ್ಟಿ ಎಸೆಯಲಾಗಿತ್ತು. ಎರಡು ತಿಂಗಳ ನಂತರ ಬಾಲಕಿಯ ಕೊಲೆ ಪ್ರಕರಣವನ್ನು ಪೊಲೀಸರು ಬೇದಿಸಿದ್ದಾರೆ. ಗುಟ್ಕಾ ತರದ ಹಿನ್ನೆಲೆ ಕೋಲಿನಿಂದ ಬಾಲಕಿಯ ತಲೆಗೆ ಹೊಡೆದಿದ್ದ. ತಲೆಗೆ ಜೋರಾದ ಪೆಟ್ಟು ಬಿದ್ದ ಹಿನ್ನೆಲೆ ಸ್ಥಳದಲ್ಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಬಾಲಕಿ ಸಾವನ್ನಪ್ಪಿರೊ ಭಯದಲ್ಲಿ ಚೀಲದಲ್ಲಿ ತುಂಬಿ ಮನೆಯ ಹಿಂದೆ ಇಟ್ಟಿದ್ದ, ಚೀಲದಲ್ಲಿ ತುಂಬಿದ ಹಿನ್ನೆಲೆ ಉಸಿರುಗಟ್ಟಿ ಬಾಲಕಿ ಸಾವನ್ನಪ್ಪಿದ್ದಾರೆ.
ಶವದ ವಾಸನೆ ಬರಲು ಶುರುವಾದ ಹಿನ್ನೆಲೆ ಚೀಲ ಇಟ್ಟಿದ್ದ ಸ್ಥಳವನ್ನು ಆರೋಪಿ ಬದಲಾವಣೆ ಮಾಡಿದ್ದ. ಬಾಲಕಿಯ ಪಕ್ಕದ ಮನೆಯ ಸಿದ್ದಲಿಂಗಯ್ಯ ಎಂಬಾತನಿಂದ ಕೃತ್ಯ ನಡೆದಿದೆ.