ಬೆಂಗಳೂರು: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಅಖಾಡ ರಂಗೇರಿದೆ, 3 ರಾಜಕೀಯ ಪಕ್ಷಗಳಲ್ಲಿ ತಂತ್ರಗಾರಿಕೆ ಜೋರಾಗ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸೀಟ್ ಫೈನಲ್ ಮಾಡೋಕೆ ದೆಹಲಿಯಲ್ಲಿ ಕೊನೆಯ ಹಂತದ ಸರ್ಕಸ್ ನಡೆಸ್ತಿದ್ರೆ, ಕಾಂಗ್ರೆಸ್- ಬಿಜೆಪಿ ನಾಯಕರು ಇನ್ನುಳಿದ ಕ್ಷೇತ್ರಗಳ ಲಿಸ್ಟ್ ಫೈನಲ್ ಮಾಡೋಕೆ ಪ್ರಯತ್ನಪಡ್ತಿದ್ದಾರೆ. ನಾಳೆ ಬಿಜೆಪಿಯ ಸೆಕೆಂಡ್ ಲಿಸ್ಟ್ ಘೋಷಣೆಯಾಗೋ ಸಾಧ್ಯತೆ ಇದ್ರೆ, ಕಾಂಗ್ರೆಸ್ ಲಿಸ್ಟ್ ಗೆ 3-4 ದಿನ ಕಾಯಬೇಕಾಗಿದೆ. ಮಂಡ್ಯ ಅಖಾಡ ಈ ಭಾರಿಯೂ ರಂಗೇರ್ತಿದ್ದು ನಿಖಿಲ್ ಕುಮಾರಸ್ವಾಮಿ ಸ್ಫರ್ಧೆ ಬಹುತೇಕವಾಗಿದ್ದು ಸಂಸದೆ ಸುಮಲತಾ ನಡೆ ಇನ್ನೂ ನಿಗೂಡವಾಗಿದೆ..
ನಿನ್ನೆ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ ಕರ್ನಾಟಕದಲ್ಲಿ 2 ಹಂತಗಳಲ್ಲಿ ಎಲೆಕ್ಷನ್ ನಡಿತಿದ್ದು ಏಫ್ರಿಲ್ 26 ರಂದು ಹಳೇ ಮೈಸೂರು ಭಾಗ, ಮೇ7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದೆ. ಸದ್ಯ ರಾಜ್ಯ ಬಿಜೆಪಿ 20 ಕ್ಷೇತ್ರಗಳ ಮೊದಲ ಲಿಸ್ಟ್ ಬಿಡುಗಡೆ ಮಾಡಿದ್ರೆ, ಕಾಂಗ್ರೆಸ್ 8 ಕ್ಷೇತ್ರಗಳನ್ನು ಘೋಷಣೆ ಮಾಡಿದೆ ಇನ್ನುಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡಿತಿದೆ.. ಬಿಜೆಪಿ- ಜೆಡಿಎಸ್ ಚುನಾವಣಾ ಮೈತ್ರಿ ಮಾಡ್ಕೊಂಡಿರೋದ್ರಿಂದ ಸೀಟು ಹಂಚಿಕೆ ಇನ್ನು ಫೈನಲ್ ಆಗಿಲ್ಲ ಕೊನೆಯ ಹಂತದ ಕಸರತ್ತಿನಲ್ಲಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸ್ತಿದ್ದು ನಾಳೆಯೊಳಗೆ ಸೀಟ್ ಹಂಚಿಕೆ ಘೋಷಣೆಯಾಗಲಿದೆ. ಈಗಾಗ್ಲೆ 25- 3 ಸೂತ್ರ ಫೈನಲ್ ಆಗಿದ್ದು 3 ನೇ ಸೀಟ್ ಗೆ ಗೊಂದಲ ಇದೆ. ಮಂಡ್ಯ- ಹಾಸನ ಜೆಡಿಎಸ್ ಗೆ ಅಂತ ಆಗಿದ್ದು ಕೋಲಾರ ಕೊಡಬೇಕಾ ಬೇಡ್ವಾ ಅನ್ನೋದು ಚರ್ಚೆಯಾಗ್ತಿದೆ. ಇನ್ನು ರಾಜ್ಯದ ಕುತೂಹಲ ಕೆರಳಿಸಿರುವ ಕ್ಷೇತ್ರವಾದ ಮಂಡ್ಯ ಅಖಾಡ ಈ ಭಾರಿಯೂ ರಂಗೇರ್ತಿದ್ದು ಕಳೆದ ಭಾರಿಯ ಸೊಲಿನ ಅವಮಾನಕ್ಕೆ ಠಕ್ಕರ್ ಕೊಡಲು ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ.
KSRTC ಸಿಬ್ಬಂದಿಗಳಿಗೆ ಭರ್ಜರಿ ಸಿಹಿ ಸುದ್ದಿ.! ಬಾಕಿ ಮೊತ್ತ ಪಾವತಿಗೆ ಆದೇಶ
ನಿಖಿಲ್ ಸ್ಪರ್ಧೆಗೆ ಪರ- ವಿರೋಧ ಚರ್ಚೆಯಾಗ್ತಿದ್ದು ಇದಕ್ಕೆ ಬಿಜೆಪು ಹೈಕಮಾಂಡ್ ಒಪ್ಪಿಗೆ ಕೊಡಬೇಕಾಗಿದೆ. ಈಗಾಗ್ಲೆ ದೊಡ್ಡಗೌಡ್ಎ ಕುಟುಂಬ ದಿಂದ ಪ್ರಜ್ವಲ್ ರೇವಣ್ಣ, ಡಾ. ಮಂಜುನಾಥ್ ಸ್ಪರ್ಧಿಸ್ತಿದ್ರೆ 3 ನೇ ಅಭ್ಯರ್ಥಿ ನಿಖಿಲ್ ಬೇಕಾ ಎಂಬ ಚರ್ಚೆ ಶುರುವಾಗಿದೆ. ಮಂಡ್ಯದಿಂದ ನಿಖಿಲ್ ಸ್ಫರ್ಧೆ ಬಹುತೇಕ ಫಿಕ್ಸ್ ಆಗಿದ್ದು. ಸಂಸದೆ ಸುಮಲತಾ ಅವರನ್ನ ಮನವೊಲಿಸುವ ಕೆಲಸ ನಡಿತಿದೆ. ಬಿಜೆಪಿ ಹೈಕಮಾಂಡ್ ಸುಮಲತಾ ರನ್ನ ದೆಹಲಿಗೆ ಕರೆಸಿಕೊಂಡಿದ್ದು ಅವರನ್ನ ಮನವೊಲಿಸುವ ಕೆಲಸ ಮಾಡ್ತಿದೆ. ಕುಮಾರಸ್ವಾಮಿ ಅವರು ಜೆಡಿಎಸ್ ನ ಲಿಸ್ಟ್ ಅನ್ನು ಬಿಜೆಪಿ ಹೈಕಮಾಂಡ್ ನಾಯಕರಿಂದಲೇ ಅನೌನ್ಸ್ ಮಾಡಿಸಲು ಪ್ಲಾನ್ ಮಾಡಿದ್ದು ನಾಳೆ ಘೋಷಣೆಯಾಗಲಿರೋ ಬಿಜೆಪಿ ಲಿಸ್ಟ್ ಜೊತೆ ಜೆಡಿಎಸ್ ಲಿಸ್ಟ್ ಬರೋ ಸಾಧ್ಯತೆ ಇದೆ..
ಇನ್ನು ಬಿಜೆಪಿ- ಜೆಡಿಎಸ್ ಲಿಸ್ಟ್ ಬಗ್ಗೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ ಕುಮಾರಸ್ವಾಮಿ ಅವ್ರು ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿದ್ದಾರೆ. ಎನು ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ ನಾಳೆಯೊಳಗೆ ಅಭ್ಯರ್ಥಿಗಳನ್ನ ಫೈನಲ್ ಮಾಡಿ ಬಿಡುಗಡೆ ಮಾಡಲಾಗುತ್ತೆ ಎಂದ್ರು. ಇದೇ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಅಶೋಕ ಜೆಡಿಸ್ ಜತೆ ಸೌಹಾರ್ದಯುತ ಮಾತುಕತೆ ನಡೀತಿದೆ, ಜೆಡಿಎಡ್ ನವ್ರು 3 ಕ್ಷೇತ್ರ ಕೇಳ್ತಿದ್ದಾರೆ. ಆದ್ರೆ ಗೆಲ್ಲುವುದು ಮಾನದಂಡ ಆಗಿದೆ, ಹೀಗಾಗಿ ಎರಡೂ ಕಡೆಯೂ ಮಾತಾಡಿ ತೀರ್ಮಾನ ಮಾಡ್ತಾರೆ ಎಂದ್ರು ಅಶೋಕ.
ಇನ್ನು ಕಾಂಗ್ರೆಸ್ ನ 20 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗೇ ಇದೆ, ಕೆಲವು ಕ್ಷೇತ್ರಗಳಲ್ಲಿ ಹುಡುಕಾಟ ಮುಂದುವರೆಯುತ್ತಿದ್ರೆ, ಕೆಲವು ಕಡೆ 2-3 ಹೆಸರುಗಳ ಗೊಂದಲ ಇದೆ. ಕೆಲ ಸಚಿವರು ಸ್ಪರ್ಧೆಗೆ ಹಿಂದೇಟಾಗ್ತಿರೊದು ಕಾಂಗ್ರೆಸ್ ಗೆ ತಲೆನೋವಾಗಿದೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗ್ಯಾರಂಟಿ ಸಮಿತಿಗೆ ನೇಮಕ ಮಾಡಿದವರಿಗೆಲ್ಲಾ ಚುನಾವಣೆ ಜವಾಬ್ದಾರಿ ಕೊಡುತ್ತೇವೆ. ಈ ಎಲೆಕ್ಷನ್ ನಲ್ಲಿ ನಾಮಿನೇಶನ್ ಮಾಡುವುದು ಅಷ್ಟೆ ಅಲ್ಲಾ ಪಕ್ಷಕ್ಕೂ ದುಡಿಯಬೇಕು.
ಇನ್ನು 2- 3 ದಿನದಲ್ಲಿ ಲಿಸ್ಟ್ ಫೈನಲ್ ಮಾಡಿ ದೆಹಲಿಗೆ ಕಳಿಸ್ತೀವಿ ಅವರು ಘೊಷಣೆ ಮಾಡ್ತೀವಿ ಎಂದ್ರು ಡಿಕೆಶಿ. ಒಟ್ನಲ್ಲಿ ನಾಳೆಯೊಳಗೆ ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ ಫೈನಲ್ ಆಗಲಿದ್ದು. 25-3 ಬಹುತೇಕವಾಗಿದ್ದು ಬಿಜೆಪಿ ನಾಯಕರಿಂದಲೇ ಲಿಸ್ಟ್ ಅನೌನ್ಸ್ ಮಾಡಲು ದಳಪತಿಗಳು ಪ್ಲಾನ್ ಮಾಡ್ತಿದ್ದಾರೆ. ಕಾಂಗ್ರೆಸ್ ನ 20 ಕ್ಷೇತ್ರಗಳ ಆಯ್ಕೆ ಕಗ್ಗಂಟಾಗಿದ್ದು ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡಿತಿದೆ ಸಚಿವರನ್ನ ಸ್ಪರ್ಧೆಗೆ ಒಪ್ಪಿಸಲು ಕೈ ಹೈಕಮಾಂಡ್ ಕಸರತ್ತು ನಡೆಸ್ತಿದೆ. ಈ ಎಲ್ಲಾ ಅಡೆತಡೆಗಳ ಮಧ್ಯೆಯೂ 3 ಪಕ್ಷಗಳಲ್ಲಿ ಪ್ರಚಾರದ ಭರಾಟೆ ಮಾತ್ರ ಜೋರಾಗಿ ನಡಿತಿದೆ.