ಬೆಂಗಳೂರು: ಆತ ಏರಿಯಾ ದಲ್ಲಿ ಹವಾ ಮಾಡೋಕೆ ಶುರುಮಾಡಿದ್ದ ಗಾಂಜಾಗೆ ಅಡಿಕ್ಟ್ ಹಾಗಿ ಡಕಾಯತಿ, ದರೋಡೆ ಮಾಡಿ ರಾಜಗೋಪಲನಗರ ದಲ್ಲಿ ರೌಡಿ ಪಟ್ಟಿ ಓಪನ್ ಮಾಡಿಸಿಕೊಂಡಿದ್ದ.. ಜೈಲಿಗೆ ಹೋಗಿ ಹೊರಗ್ ಬಂದ್ರೂ ಅಟ್ಟಹಾಸ ಮೆರೆದಿದ್ದ.. ಯುವಕನನ್ನ ಬೆತ್ತಲೆ ವಿಡಿಯೋ ಮಾಡಿದ್ದ.. ಪೊಲೀಸರಂದ್ರೆ ಭಯವೇ ಇಲ್ಲ ಅನ್ನೋಹಾಗೆ ವರ್ತಿಸಿದ್ದ.. ಆ ರೌಡಿ ಮೇಲೆ ಶೂಟೌಟ್ ಆಗಿದೆ.. ಕಾಲಿಗೆ ಗುಂಡೇಟು ಕೊಟ್ಟು ಹೆಡೆಮುರಿ ಕಟ್ಟಿದಾರೆ.
ನಿನ್ನೆಯಷ್ಟೆ ವಿಡಿಯೋವೊಂದು ವೈರಲ್ ಆಗಿತ್ತು.. ಯುವಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ ರೌಡಿಶೀಟರ್ ಆತನನ್ನ ಬೆತ್ತಲೆ ಮಾಡಿಸಿ ಓಡಿಸಿದ್ದ.. ಈ ಒಂದು ವಿಡಿಯೋ ನಗರದಲ್ಲಿ ಪೊಲೀಸರು ಇದ್ದಾರೋ ಇಲ್ವೋ ಅನ್ನೋ ಪ್ರಶ್ನೆ ಮಾಡುವಂತಿತ್ತು.. ಆ ರೌಡಿಶೀಟರ್ ನನ್ನ ಇವತ್ತು ಪೊಲೀಸರು ಅರೆಸ್ಟ್ ಮಾಡಿದ್ದಾರೆ.. ಅರೆಸ್ಟ್ ಮಾಡೋಕೆ ಹೋದಾಗ್ಲೂ ಪೊಲೀಸರ ಬಳಿಯೇ ನಕರಾ ಮಾಡಿದ್ದ ರೌಡಿ ಕಾಲಿಗೆ ಗುಂಡಿಟ್ಟು ಬಂಧಿಸಿದ್ದಾರೆ..
ಅಂದ್ಹಾಗೆ ಈ ಫೋಟೋದಲ್ಲಿರೋ ಈ ಪುಂಡನೇ ನೋಡಿ ಪೊಲೀಸರ ಗುಂಡೇಟು ತಿಂದು ಅರೆಸ್ಟ್ ಆಗಿರೋ ರೌಡಿಶೀಟರ್.. ಇವ್ನ ಹೆಸ್ರು ಪವನ್ ಗೌಡ ಅಲಿಯಾಸ್ ಕಡಬು.. ರಾಜಗೋಪಾಲ ನಗರ ಠಾಣೆ ರೌಡಿಶೀಟರ್ ಆಗಿರೋ ಈ ಕಡಬು ಗಾಂಜಾ ಅಡಿಕ್ಟ್.. ಗಾಂಜಾ ಮತ್ತಲ್ಲಿ ಡಕಾಯತಿ, ದರೋಡೆ ಮಾಡೋದೆ ಇವ್ನ ಕೆಲಸ.. ಸುಮಾರು ಹನ್ನೊಂದು ಕೇಸ್ ಗಳಲ್ಲಿ ಭಾಗಿಯಾಗಿದ್ದ ಈ ಕಡಬು ಹಲವು ಬಾರಿ ಜೈಲಿಗೆ ಹೋಗಿ ಬಂದ್ರೂ ಬುದ್ದಿ ಬಿಟ್ಟಿರಲಿಲ್ಲ.. ಅಲ್ದೇ ಕಾಮಾಕ್ಷಿಪಾಳ್ಯ ಲಿಮಿಟ್ಸ್ ನಲ್ಲೂ ಒಂದು ಕೃತ್ಯ ಎಸಗಿ ವಾರೆಂಟ್ ಇಶ್ಯೂ ಆದ್ರೂ ತಲೆಮರೆಸಿಕೊಂಡಿದ್ದ.. ವಾರೆಂಟ್ ಇರೋದ್ರಿಂದ ಕೆಲ ತಿಂಗಳ ಹಿಂದೆ ಈತನನ್ನ ಬಂಧಿಸಿದ್ದ ಪೊಲೀಸರು ಜೈಲಿಗಟ್ಟಿದ್ರು.. ಒಂದು ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ಪವನ್ @ ಕಡಬು ನಾಗರ್ಜುನ ಅಲಿಯಾಸ್ ಅರ್ಜು ಎಂಬಾತನನ್ನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿ ಬೆತ್ತಲೆ ಓಡಿಸಿದ್ದ..
ಅಲ್ದೆ ಅದನ್ನ ವಿಡಿಯೋ ಮಾಡಿ ತನ್ನ ಹುಡುಗರಿಗೂ ತೋರಿಸಿದ್ದ.. ಕಳೆದ ಎರಡು ಮೂರು ದಿನದ ಹಿಂದೆ ಆ ವಿಡಿಯೋ ವೈರಲ್ ಆಗಿದ್ದು ಮಾಧ್ಯಮಗಳಲ್ಲಿ ಸುದ್ದಿ ಬಂದ ಬೆನ್ನಲ್ಲೇ ಪೊಲೀಸ್ರು ಆತನನ್ನ ಹುಡುಕೋಕೆ ಮುಂದಾಗಿದ್ರು.. ಇವತ್ತು ಬೆಳಗ್ಗೆ 3.30ರ ಸುಮಾರಿಗೆ ಜ್ಞಾನ ಭಾರತಿ ಬಳಿಯ ಉಳ್ಳಾಳ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಕಡಬುನನ್ನ ಹಿಡಿಯೋಕೆ ಕಾಮಾಕ್ಷಿಪಾಳ್ಯ ಇನ್ಸಪೆಕ್ಟರ್ ಹಾಗೂ ಗೋವಿಂದರಾಜನಗರ ಇನ್ಸಪೆಕ್ಟರ್ ಸುಬ್ರಮಣಿ ತಂಡ ಅಡ್ಡ ಹಾಕಿದೆ.. ಈ ವೇಳೆಯೂ ತನ್ನ ನಕರಾ ಬುದ್ದಿ ತೋರಿಸಿದ್ದಾನೆ.. ಎಸ್ಕೇಪ್ ಆಗೋಕೆ ಮುಂದಾಗಿದ್ದ ಕಡಬು.. ಕಾಮಾಕ್ಷಿಪಾಳ್ಯ ಹೆಡ್ ಕಾನ್ಸ್ಟೇಬಲ್ ವೆಂಕಟೇಶ ಎಂಬುವರಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗೋಕೆ ಮುಂದಾಗಿದ್ದ ಈ ವೇಳೆ ಒಂದು ರೌಂಡ್ ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನ್ ಮಾಡಿದ್ದ ಇನ್ಸಪೆಕ್ಟರ್ ಸುಬ್ರಮಣಿ ಶರಣಾಗುವಂತೆ ಸೂಚಿಸಿದ್ರು.. ಆದ್ರೂ ಎಸ್ಕೇಪ್ ಆಗ್ತಿದ್ದ ಪವನ್ ಅಲಿಯಾಸ್ ಕಡಬುನನ್ನ ಆತ್ಮರಕ್ಷಣೆಗಾಗಿ ಗುಂಡೇಟು ನೀಡಿ ಬಂಧಿಸಿದ್ದಾರೆ..
ಇನ್ನು ಈ ಬೆನ್ನಲ್ಲೇ ಮತ್ತೊಂದು ವಿಚಾರ ಕೂಡ ಹೊರ ಬಿದ್ದಿದೆ.. ಹಲ್ಲೆಗೆ ಒಳಗಾಗಿದ್ದ ನಾಗರ್ಜುನ ಕಡೆಯವ್ರು ಕೆಲ ಆತನನ್ನ ಬೆತ್ತಲೆಗೊಳಿಸಿ ಅವಮಾನ ಮಾಡಿದ್ದಕ್ಕೆ ಪವನ್ ಗೂ ಅದೇ ಮಾಡಿದ್ರಂತೆ.. ಬಾರ್ ವೊಂದರ ಬಳಿ ಕೂತು ಹವಾಜ್ ಹಾಕಿದ್ದ ಪವನ್ ಬಳಿ ಹೋಗಿದ್ದ ನಾಗರ್ಜುನನ ಕಡೆಯವ್ರು ಪವನ್ ನ ಅರೆಬೆತ್ತಲೆ ಮಾಡಿದ್ರಂತೆ.. ಆ ಸಿಸಿಟಿವಿ ಕೂಡ ಲಭ್ಯ ಆಗಿದ್ದು ಇದು ಪವನ್ ಮತ್ತು ನಾಗರ್ಜುನ ಮದ್ಯ ನಡೀತಿದ್ದ ಫೈಟ್ ಅನ್ನೋದು ಮೇಲುನೋಟಕ್ಕೆ ಗೊತ್ತಾಗಿದೆ.. ಸದ್ಯ ಗಾಯಾಳು ಸಿಬ್ಬಂದಿ ಹಾಗೂ ರೌಡಿಶೀಟರ್ ಪವನ್ ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ..
ಸದ್ಯ ತನಿಖೆ ನಡೆಸಲಾಗ್ತಿದ್ದು ನಿಜಕ್ಕೂ ಇದು ಎರಡು ಗುಂಪುಗಳ ನಡುವಿನ ವಾರ್ ಹಾ.. ಅಥವಾ ಪೊಲೀಸರಿಗೆ ಇನ್ಫಾರ್ಮೇಶನ್ ಕೊಟ್ಟಿದ್ದಕ್ಕೆ ನಾಗರ್ಜುನ ಮೇಲೆ ಪವನ್ ಹಲ್ಲೆ ಮಾಡಿ ಬೆತ್ತಲೆ ಓಡಿಸಿದ್ನಾ.. ಅನ್ನೋದು ತನಿಖೆ ನಂತರವೇ ಗೊತ್ತಾಗ್ಬೇಕು..