ಬೆಂಗಳೂರು:- ಸ್ವಂತ ತಾಯಿಯನ್ನು ಕೊಂದ ಅಪರಾಧಿ ಮಗನೊಬ್ಬನಿಗೆ ವಿಶಿಷ್ಟ ರೀತಿಯ ಶಿಕ್ಷೆಯನ್ನು ವಿಧಿಸಿದೆ.
ಕುಡಿದ ಮತ್ತಿನಲ್ಲಿ ಮಗ ನೀಡಿದ್ದ ದೊಣ್ಣೆ ಏಟಿಗೆ ಈ ಪ್ರಕರಣದಲ್ಲಿ ತಾಯಿಯಾದವಳು ಸಾವನ್ನಪ್ಪಿದ್ದಳು.
ಯತ್ನಾಳ್ ಬೈದರೆ ನಮಗೂ ಒಳ್ಳೆಯದೇ ಆಗುತ್ತೆ.. ವಚನಾನಂದ ಸ್ವಾಮೀಜಿಗಳು..!
ಗಂಗಮ್ಮ ಅನ್ನೋ ಮಹಿಳೆಯನ್ನು ಆಕೆಯ ಮಗ ಅನಿಲ್ ಕುಡಿದ ಮತ್ತಿನಲ್ಲಿ ಆ ದಿನ ದೊಣ್ಣೆಯಿಂದ ಹಲ್ಲೆ ನಡೆಸಿದ್ದ. ಪ್ರತಿದಿನ ಕುಡಿದು ಬರುತ್ತಿದ್ದ ಮಗ ಕೆಲಸಕ್ಕೆ ಹೋಗದೇ ಇರುವುದನ್ನ ಆಕ್ಷೇಪಿಸಿದ್ದೇ ಗಂಗಮ್ಮಳ ಮೇಲೆ ಆತ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸುವಂತೆ ಮಾಡಿತ್ತು. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರು ಮರಣ ಪೂರ್ವ ಹೇಳಿಕೆಯನ್ನು ಪಡೆದಿದ್ದರು. ಅಷ್ಟಾಗುತ್ತಲೇ ಮಹಿಳೆ ಅಸುನೀಗಿದ್ದರು. ಆದರೆ, ಈ ಪ್ರಕರಣವು ಕೊಡಗು ಜಿಲ್ಲಾ 1ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ತಾಯಿಯನ್ನು ಕೊಂದ ಪ್ರಕರಣದಿಂದ ಅನಿಲ್ನನ್ನು ಖುಲಾಸೆಗೊಳಿಸಿತ್ತು. ಇದನ್ನ ಮಡಿಕೇರಿ ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಮರು ವಿಚಾರಣೆಗೆ ಮನವಿ ಮಾಡಿದ್ದರು. ಇದೀಗ ಹೈಕೋರ್ಟ್ ವಿಚಾರಣೆ ಬಳಿಕ ತೀರ್ಪು ಪ್ರಕಟಿಸಿದೆ.
ಹೈಕೋರ್ಟ್ ವಿಚಾರಣೆ ನಡೆಸಿ ಐಪಿಸಿ ಸೆಕ್ಷನ್ 304 (2) ರ ಪ್ರಕಾರ ಅನಿಲ್ನನ್ನು ದೋಷಿ ಎಂದು ಘೋಷಿಸಿತು. ಆದರೆ, ಅದಾಗಲೇ ಅನಿಲ್ 2 ವರ್ಷಗಳ ಜೈಲು ವಾಸ ಅನುಭವಿಸಿದ್ದರಿಂದ ಹೈಕೋರ್ಟ್ ಆತನನ್ನು ಪುನಃ ಸೆರೆವಾಸಕ್ಕೆ ತಳ್ಳಲು ಇಷ್ಟಪಡಲಿಲ್ಲ. ಅಲ್ಲದೇ, ಆತ ಕುಡಿದ ಮತ್ತಿನಲ್ಲಿ ತಾಯಿಗೆ ಹಲ್ಲೆ ನಡೆಸಿದ್ದು ಆಕೆಯನ್ನು ಕೊಲ್ಲುವ ಉದ್ದೇಶದಿಂದ ಅಲ್ಲ ಎಂದು ಅಭಿಪ್ರಾಯಪಟ್ಟಿದೆ