ಬೆಂಗಳೂರು :– ಕೇಂದ್ರದ ನೂತನ ಕಾನೂನುಗಳಿಗೆ ತಿದ್ದುಪಡಿ ತರಲು ಸಿದ್ದರಾಮಯ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಸಂಬಂಧ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ರಾಜ್ಯ ಸರ್ಕಾರಕ್ಕೆ ಈ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಸಾಮರ್ಥ್ಯ ಹೊಂದಿದೆ.
![Demo](https://ainlivenews.com/wp-content/uploads/2023/12/spoorthi-1.jpg)
Weight Loss Tips: ಜಿಮ್ ಗೆ ಹೋಗದೆ ತೂಕ ಇಳಿಸಿಕೊಳ್ಳಬೇಕೆ?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ..!
ನಮ್ಮ ಮನವಿಯನ್ನು ಒಪ್ಪದೇ ಜನಾಭಿಪ್ರಾಯ ನಿರ್ಲಕ್ಷ್ಯ ಮಾಡಿ ಮುಂದುವರೆದರೆ ತಿದ್ದುಪಡಿ ಮಾಡಲಾಗುವುದು. ಈ ಕಾನೂನುಗಳಿಗೆ ಸಂಬಂಧಿಸಿದ ರಾಜ್ಯದ ವ್ಯಾಪ್ತಿಯಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 7ರ 3ನೇ ಪಟ್ಟಿಯಲ್ಲಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಕಾನೂನುಗಳನ್ನು ಜವಾಬ್ದಾರಿ ಮರೆತು ಹಿಂದಿನ ಸರ್ಕಾರ ಕ್ಯಾಬಿನೆಟ್ ಆಗಿರುವ ನಿರ್ಣಯವನ್ನ ಈ ಸರ್ಕಾರದಲ್ಲಿ ಜಾರಿಗೆ ತಂದಿದ್ದು ಸೂಕ್ತವಲ್ಲ. ಈ ಬಿಲ್ ಬಗ್ಗೆ ಸಲಹೆ, ಸೂಚನೆ ಮತ್ತು ಜಾರಿಗೆ ತರಬೇಕು ಅಂತ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಳೆದ ಸರ್ಕಾರದ ಅವಧಿಯಲ್ಲಿ ಪತ್ರ ಬರೆದಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ನನಗೆ ಮಾಹಿತಿ ನೀಡಿದ್ದರು. ತಮ್ಮ ಅಧ್ಯಕ್ಷತೆಯಲ್ಲಿ ಒಂದು ವರದಿ ನೀಡಬೇಕೆಂದು ಸೂಚನೆ ನೀಡಿದ್ದರು ಎಂದು ತಿಳಿಸಿದರು
ಅದರನ್ವಯ ನಾನು ಸಿಎಂ ಅವರಿಗೆ ವರದಿ ನೀಡಿದ್ದೇನೆ. ಅವರು ಅಮಿತ್ ಶಾ ಅವರಿಗೆ ಈ ವರದಿ ಕುರಿತು ಪತ್ರ ಬರೆದಿದ್ದರು. ನಾನು ಕೊಟ್ಟಿರುವ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ನಮ್ಮ ಸಲಹೆಗಳನ್ನು ನಿರ್ಲಕ್ಷ್ಯ ಮಾಡಿದ್ದರು. ಈ ಕಾನೂನುಗಳು ಅನಾನುಕೂಲ ಆಗುವುದೇ ಹೆಚ್ಚು. ಗೊಂದಲ, ಗೋಜಲು ಮೂಡಿಸುವ ಕ್ರಮಗಳೇ ಈ ಕಾನೂನುಗಳಿಂದ ಆಗುತ್ತವೆ
ನಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯ ಗಮನಿಸಲಿಲ್ಲ. ಈ ಕಾನೂನುಗಳನ್ನ ನಮ್ಮ ಸರ್ಕಾರ ವಿರೋಧಿಸುವುದಲ್ಲದೇ ಹಾಗೂ ಅದರಲ್ಲಿ ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)