ಕಾರವಾರ:– ದಲಿತರಿಗೆ ಮೀಸಲಾಗಿದ್ದ ಹಣವನ್ನು ಸರ್ಕಾರ ಬಾಚಿಕೊಳ್ಳುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸರಕಾರದಿಂದ ಜನರಿಗೆ ಫ್ರೀ ಬಸ್ ಟಿಕೆಟ್ ಸಿಕ್ಕಿರಬಹುದು, ಆದರೆ ಬಸ್ ಸಿಗಲ್ಲ, ಹೊಸ ಬಸ್ ಕೂಡಾ ಬರುವುದಿಲ್ಲ. ಜನರ ಮನೆಯ ಕಾರುಗಳು ಕೂಡಾ ಓಡಾಡಲು ಉತ್ತಮ ರಸ್ತೆಗಳು ದೊರೆಯುವುದಿಲ್ಲ. ಕಳೆದ ಎಂಟು ತಿಂಗಳಲ್ಲಿ ಕಾಂಗ್ರೆಸ್ ಸರಕಾರದಿಂದ ಯಾವುದೇ ಒಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿಲ್ಲ. ಪ್ರಧಾನಿ ಮೋದಿ ದೇಶವನ್ನು 100 ವರ್ಷ ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರೆ, ಕರ್ನಾಟಕ 50 ವರ್ಷ ಹಿಂದೆ ಹೋಗುತ್ತಿದೆ ಎಂದರು.
ಮಧು ಬಂಗಾರಪ್ಪ ದುರದೃಷ್ಠವಶಾತ್ ನಮ್ಮ ಶಿಕ್ಷಣ ಸಚಿವರು. ಇತ್ತೀಚೆಗೆ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಶುಕ್ರವಾರ ಬಿಟ್ಟು ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ ಪರೀಕ್ಷೆಯಿತ್ತು. ಇದನ್ನು ಪ್ರಶ್ನಿಸಿದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಶ್ನೆ ಕೇಳಬಾರದಂತಹ ಧಮನ ನೀತಿಯನ್ನು ಸರಕಾರ ಪಾಲಿಸುತ್ತಿದೆ. ಕಾಂಗ್ರೆಸಿನವರು ಮಾತೆತ್ತಿದರೆ ಪ್ರಜಾಪ್ರಭುತ್ವ, ಕಾನೂನು, ನ್ಯಾಯ ಅಂತಾರೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ಗೆ ಗೌರವ ಕೊಡುವಂತಹ ಯಾವುದೇ ಪ್ರಕ್ರಿಯೆ ನಡೆಸಲ್ಲ ಎಂದರು.
2014ರಲ್ಲಿ ಗುಲ್ಬರ್ಗಾದಲ್ಲಿ ಖರ್ಗೆ ಇಎಸ್ಐ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು ಎಂದು ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಆಗ ಪ್ರಕಟವಾದ ಸುದ್ದಿಗಳು ಇವರಿಗೆ ಮಿಸ್ ಇನ್ಫಾರ್ಮೇಶನ್ ಅಲ್ಲ. ಆದರೆ, ಪ್ರಧಾನಿ ಮೋದಿ ಈಗ ಮಾಡುವ ಉತ್ತಮ ಕಾರ್ಯಗಳು ಇವರಿಗೆ ಮಿಸ್ ಇನ್ಫಾರ್ಮೇಶನ್ ಆಗುತ್ತಿದೆ ಎಂದರು.