ಬೆಂಗಳೂರು: ಗ್ಯಾರಂಟಿ ಯೋಜನೆ ಬಿಸಿ ಈಗ ಕಾರ್ಮಿಕರ ಮಕ್ಕಳಿಗೂ ತಟ್ಟಿದೆ. ಇದರಿಂದ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿದ್ದ ಸಹಾಯ ಧನ(ವಿದ್ಯಾರ್ಥಿ ವೇತನ) ಕಡಿತಗೊಳಿಸಿದೆ. ಮಾರ್ಚ್ 16ರಂದೇ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಕಾರ್ಮಿಕ ಇಲಾಖೆ ಅಧೀನ ಕಾರ್ಯದರ್ಶಿ ಸುಮ ಎಸ್ ಅವ್ರಿಂದ ಅವರು ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಮಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಕಚ್ಚಾತೈಲದ ಬೆಲೆ ಇಳಿಕೆ: ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಹೇಗಿದೆ ಗೊತ್ತಾ?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬಂಪರ್ ಸಹಾಯಧನ ನೀಡಲಾಗಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರದಿಂದ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಭಾರಿ ಹೊಡೆತ ಬಿದ್ದಿದೆ. KG, Pre Schoolಗೆ ನೀಡಲಾಗುತ್ತಿದ್ದ 5,000 ಧನ ಸಹಾಯ ಸಂಪೂರ್ಣ ರದ್ದು ಮಾಡಿ ಕಾಂಗ್ರೆಸ್ ಸರ್ಕಾರ ಆದೇಶ ಮಾಡಿದೆ. ಇನ್ನು 1 ರಿಂದ 4ನೇ ತರಗತಿಗೆ 5 ಸಾವಿರವಿದ್ದ ಸಹಾಯ ಧನ 1,800ಕ್ಕೆ ಕಡಿತಗೊಳಿಸಿದೆ. 5 ರಿಂದ 8ನೇ ತರಗತಿಗೆ 8 ಸಾವಿರ ಇದ್ದ ಶೈಕ್ಷಣಿಕ ಸಹಾಯ ಧನವನ್ನು 2,400ಕ್ಕೆ ಇಳಿಸಿದೆ. 9, 10ನೇ ತರಗತಿಗೆ 12 ಸಾವಿರ ಇದ್ದ ಸಹಾಯ ಧನವನ್ನು 3 ಸಾವಿರಕ್ಕೆ ಇಳಿಸಿದೆ.
PUCಗೆ ಇದ್ದ 15 ಸಾವಿರ ಸಹಾಯ ಧನವನ್ನು 4,600ಕ್ಕೆ ಇಳಿಸಿದೆ. Diploma, ITI 20 ಸಾವಿರದಿಂದ 4,600ಕ್ಕೆ ಕಡಿತಗೊಳಿಸಿದೆ. BA, B.COM ಯಾವುದೇ ಪದವಿಗೆ ಇದ್ದ 40 ಸಾವಿರ ಸಹಾಯ ಧನವನ್ನು 10 ಸಾವಿರಕ್ಕೆ ಇಳಿಸಲಾಗಿದೆ. MBBS, ENG, M.Tech, ME, 60 ಸಾವಿರ ಇದ್ದ ವಿದ್ಯಾರ್ಥಿ ವೇತನ 11 ಸಾವಿರಕ್ಕೆ ಕಡಿತಗೊಳಿಸಲಾಗಿದೆ. ಹೀಗೆ ಪ್ರತಿಯೊಂದು ಪದವಿಗಳಿಗೆ ನೀಡುವ ಶೈಕ್ಷಣಿಕ ಸಹಾಯಧನದಲ್ಲಿ ಕಾಂಗ್ರೆಸ್ ಭಾರಿ ಕಡಿತ ಮಾಡಿದೆ. ಗ್ಯಾರಂಟಿ ಯೋಜನೆಯಿಂದಲೇ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಮಿಕ ವಲಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.