ಮಂಡ್ಯ:- ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಕಡೆಗೂ ಮುನಿಸು ಮರೆತು ವರುಣ ಧರೆಗಿಳಿದಿದ್ದಾನೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಕಾರ ಮಳೆ ಆಗಿದೆ.
MP Election: ಈ ಬಾರಿ “ಕೈ” ಅಭ್ಯರ್ಥಿಗಳು ಸೋತರೆ ಸಿಎಂ ಸ್ಥಾನಕ್ಕೆ ಕಂಟಕ -ಬೈರತಿ ಸುರೇಶ್
ಗುಡುಗು, ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಬಿಸಿಲಿನ ಬೇಗೆಯಿಂದ ಬೆಂಡಾಗಿದ್ದ ಇಳೆಗೆ ವರುಣ ತಂಪೆರದಿದೆ. ವರ್ಷದ ಮೊದಲ ಮಳೆ ಕಂಡು ರೈತರು, ಮಂಡ್ಯ ಜನರ ಮೊಗದಲ್ಲಿ ಹರ್ಷ ಮನೆ ಮಾಡಿದೆ. ಮಳೆಯಿಂದ ಮಣ್ಣಿನ ವಾಸನೆ ಗಮಗಮಿಸುತ್ತಿತ್ತು.
ಮಂಡ್ಯ, ಕೆ.ಆರ್.ಪೇಟೆ,
ನಾಗಮಂಗಲ ಭಾಗದ ಹಲವೆಡೆ ಮಳೆ ಆಗಿದೆ. ಬಿರು ಬಿಸಿಲಿನಿಂದ ಕೆಂಗೆಟ್ಟಿದ್ದ ಜನಕ್ಕೆ ಮಳೆರಾಯ ತಂಪೆರೆದಿದೆ. ಮೊದಲ ಮಳೆಯ ಸಿಂಚನದಿಂದ ಜಿಲ್ಲೆಯ ಜನರಲ್ಲಿ ಮಂದಹಾಸ ಮೂಡಿದೆ.