ಹಾವೇರಿ:– ಕಾಲು ಜಾರಿ ಬಿದ್ದ ವೃದ್ದೆ ಜೀವ ಉಳಿಸಲು ತುಂಬಿದ ನದಿಗೆ ಬಸ್ ಚಾಲಕ ಹಾರಿದ ಘಟನೆ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಜರುಗಿದೆ.
ಹೂಡಿಕೆ ಹೆಸರಿನಲ್ಲಿ ವಂಚನೆ: ಲಕ್ಷ-ಲಕ್ಷ ಹಣ ಕಳೆದುಕೊಂಡ ಅಂಚೆ ಇಲಾಖೆ ನೌಕರ!
ಡ್ರೈವರ್ ಸಾಹಸಕ್ಕೆ ಸಾರ್ವಜನಿಕರು ಫಿದಾ ಆಗಿದ್ದಾರೆ. ದುರಾದೃಷ್ಟವಶಾತ್ ಕುಮದ್ವತಿ ನದಿಯಲ್ಲಿ ಕಾಲು ಜಾರಿ ಬಿದ್ದ ಅಪರಿಚಿತ ವೃದ್ದೆ ಸಾವನ್ನಪ್ಪಿದ್ದಾರೆ. ನದಿಗೆ ಬಿದ್ದ ಅಪರಿಚಿತ ವೃದ್ದೆ ಕಂಡು ಜೀವ ಉಳಿಸಲು ಚಾಲಕ ಮುಂದಾಗಿದ್ದ. ತುಂಬಿ ಹರಿಯುತ್ತಿರುವ ನದಿಯಿಂದ ವೃದ್ದೆಯನ್ನು ಚಾಲಕ ರಕ್ಷಿಸಿದ್ದ. ಆದರೆ ಉಸಿರಾಟದ ತೊಂದರೆಯಿಂದ ವೃದ್ಧೆ ಕೊನೆಯುಸಿರೆಳೆದಿದ್ದಾರೆ.
ಜೀವದ ಹಂಗು ತೊರೆದು ವೃದ್ದೆ ಕಾಪಾಡಲು ಮುಂದಾದ ಚಾಲಕನ ಪ್ರಯತ್ನ ವಿಫಲವಾಗಿದೆ. ಚಾಲಕನ ಸಾಹಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಮಾಸೂರಿನಿಂದ ಹೊನ್ನಾಳಿಗೆ ಬಸ್ ಚಾಲಕ ಹೊರಟಿದ್ದ ವೇಳೆ ಈ ಘಟನೆ ಜರುಗಿದೆ.