ಬೆಂಗಳೂರು:- ನಗರದ ಹೈಕೋರ್ಟ್ ಪೀಠವು 30 ದಿನಗಳ ಪೆರೋಲ್ ಕೇಳಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿಯನ್ನು ವಜಾ ಮಾಡಿದೆ.
ಆರೋಪಿ ಉಮೇಶ್ ರೆಡ್ಡಿ, ವಯೋವೃದ್ದೆಯಾದ ತಾಯಿಯೊಂದಿಗಿರಲು, ಜೊತೆಗೆ ದುಸ್ಥಿತಿಯಲ್ಲಿರುವ ಮನೆಯನ್ನು ದುರಸ್ತಿ ಮಾಡಬೇಕೆಂಬ ಕಾರಣ ನೀಡಿ 30 ದಿನ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರನೆ ನಡೆಸಿದ ಹೈಕೋರ್ಟ್ ಎರಡೂ ಕಾರಣಗಳಿಗೆ ಪೆರೋಲ್ ನೀಡಲು ನಿರಾಕರಿಸಿದೆ. ‘ಪೆರೋಲ್ ನೀಡಿದರೆ ಉಮೇಶ್ ರೆಡ್ಡಿ ಪ್ರಾಣಕ್ಕೆ ಅಪಾಯವೆಂದು ವರದಿಯಿದೆ. ಅಪರಾಧಿಗೆ ಇಬ್ಬರು ಸಹೋದರರಿದ್ದು ಅವರೇ ತಾಯಿಯನ್ನು ನೋಡಿಕೊಳ್ಳುತ್ತಾರೆ. ಸುಪ್ರೀಂ ಕೋರ್ಟ್ 30 ವರ್ಷ ಸೆರೆವಾಸದ ನಂತರ ಕ್ಷಮಾಧಾನ ಕೋರಬಹುದೆಂದು ಹೇಳಿದೆ. ಈ ಹಿನ್ನಲೆ ಸಾರ್ವಜನಿಕ ಹಿತದೃಷ್ಟಿಯಿಂದ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.