ಮೈಸೂರು: ಸಿದ್ದರಾಮಯ್ಯ ಒಬ್ಬ ಹೋರಾಟದಿಂದ ಬಂದ ನಾಯಕ. ಯಾಕೆ ಸಿದ್ದರಾಮಯ್ಯ ಹೀಗೆ ಆದ್ರು ಸಿದ್ದರಾಮಯ್ಯನವರೇ ಮತ್ತೆ ಮತ್ತೆ ಪ್ರಶ್ನೆ ಮಾಡಿಕೊಳ್ಳಿ. ಬಹಳ ದೊಡ್ಡ ಅಧಿಕಾರದಲ್ಲಿ ಇದ್ದೀರಿ. ನಾಡಿನ ಜನ ಅಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ ಅನಿಸುತ್ತಿದೆ ಎಂದು ಎಂಎಲ್ಸಿ ಹೆಚ್ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಮುಡಾ ಗೇಟ್ ನಲ್ಲಿ ಕೂತು ಮನವಿ ಮಾಡಿದ್ದೆ. ಆಪ್ತ ಸಹಾಯಕರಿಂದ ಏನೋ ನಡೆದಿದೆ. ಯಾರನ್ನೋ ಬಚಾವ್ ಮಾಡಲು ಮುಂದಾಗಿದ್ದೀರಾ. ನಿಮಗೆ ಇದರ ದರ್ದು ಇದೆಯಾ? ಕರ್ನಾಟಕ ಪೊಲೀಸರ ದಕ್ಷತೆ, ಪ್ರಾಮಾಣಿಕತೆ ದೇಶಕ್ಕೆ ಮಾದರಿ. ಯಾವುದೇ ಶಿಫಾರಸ್ಸು ಆಮಿಷಗಳಿಗೆ ಒಳಗಾಗದೆ ತನಿಖೆ ಮಾಡಿ. ನಾಡ ದೊರೆ ತನ್ನ ಅಧೀನ ಅಧಿಕಾರಿಗಳ ಮುಂದೆ ಕೈ ಮುಗಿಯುವ ಸ್ಥಿತಿ ಶೋಚನೀಯ ಎಂದರು.
Brahmi Leaves: ಒಂದೆಲಗದ ಉಪಯೋಗ ಒಂದೆರಡಲ್ಲ! ಈ ಸೊಪ್ಪು ಸೇವಿಸಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ
ಪೊಲೀಸರ ಮೇಲಿನ ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಿ. ನಮಗೆ ಸುಬ್ರಹ್ಮಣ್ಯೇಶ್ವರ ರಾವ್ ಮೇಲೆ ಯಾಕೋ ಡೌಟ್. ಇವರು ಕೆಂಪಯ್ಯನವರ ಶಿಷ್ಯ. ನಾನು ಒತ್ತಾಯ ಮಾಡುತ್ತೇನೆ ಲೋಕಾಯುಕ್ತ ಐಜಿ ಸ್ಥಾನದಿಂದ ತೆರವು ಮಾಡಿ. ಸಿದ್ದರಾಮಯ್ಯನವರೇ ನೀವು ಲಾಯರ್ ಆಗಿ ಕೆಲಸ ಮಾಡಿದ್ದೀರ. ನ್ಯಾಯಾಲಯದಲ್ಲಿ ನ್ಯಾಯಾಧೀಶರ ತೀರ್ಪಿನ ಮೇಲೆ ನಂಬಿಕೆ ಇಲ್ವಾ? ನೀವು ತೀರ್ಪಿನ ಕಾಪಿ ಓದಿಲ್ಲವೇ? ಎಂದು ಪ್ರಶ್ನಿಸಿದರು.