ಚಿತ್ರದುರ್ಗ: ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದೊಡ್ಡಣ್ಣ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಟಿಪ್ಪು ಸರ್ಕಲ್ ನಲ್ಲಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮಹಮದ್ ಸಾಕೀಬ್ ಅಲಿಯಾಸ್ ಘಜ್ನಿ ಎಂದು ಗುರುತಿಸಲಾಗಿದ್ದು, ಈತ ಜೈನ್ ಮೊಹಲ್ಲಾ ಅಗಸನಕಲ್ಲು 1 ನೇ ಕ್ರಾಸ್ ನ ನಿವಾಸಿಯಾಗಿದ್ದಾನೆ. ಬಂಧಿತನಿಂದ ಮಾರಾಟಕ್ಕೆ ಇಟ್ಟುಕೊಂಡಿದ್ದ 255 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.