ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದ 8ನೇ ಆರೋಪಿ-ಚಾಲಕ ರವಿ ಚಿತ್ರದುರ್ಗ ಪೊಲೀಸರ ಮುಂದೆ ಶರಣಾಗಿದ್ದಾನೆ. ಬಾಡಿಗೆಗೆ ಅಂತ ಹೇಳಿ ಆರೋಪಿ ಜಗ್ಗ ಮತ್ತು ರಘು ಕರೆಸಿಕೊಂಡಿದ್ದರು. ದರ್ಶನ್ ಭೇಟಿಗೆಂದು ಹೇಳಿ ರೇಣುಕಾಸ್ವಾಮಿ ಕರೆದುಕೊಂಡು ಬಂದಿದ್ದರು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ಬಂದಿದ್ದ ಎಂದು ರವಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಇನ್ನೂ ಫೇಕ್ ಅಕೌಂಟ್ ಬಳಸಿ ಕಾಮೆಂಟ್ ಹಾಕ್ತಿದ್ದ ರೇಣುಕಾಸ್ವಾಮಿಯ ಲೊಕೇಶನ್ ಟ್ರೇಸ್ ಮಾಡಲು ದರ್ಶನ್ ಗ್ಯಾಂಗ್, ಕೆಲ ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದಿತ್ತು ಎಂದು ಸಹ ಹೇಳಲಾಗಿದೆ. ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯ ಬೆನ್ನುಬಿದ್ದಿತ್ತು. ಜೂನ್ 2ರಂದು ಫೋನ್ ಮಾಡಿ ಬೆದರಿಕೆ ಹಾಕಿತ್ತು. ಇದರಿಂದ ರೇಣುಕಾಸ್ವಾಮಿ ವಿಚಲಿತರಾಗಿದ್ದರು. ಜೂನ್ 8ರಂದು ರೇಣುಕಾಸ್ವಾಮಿ ಕಿಡ್ನಾಪ್ಗೂ ಮುನ್ನ, ಆತನನ್ನು ಮನೆಯಿಂದ ಫಾರ್ಮಸಿವರೆಗೂ ರಾಘವೇಂದ್ರ ಅಂಡ್ ಗ್ಯಾಂಗ್ ಕಾರಲ್ಲಿ ಫಾಲೋ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
Bananas For Diabetics: ಸಕ್ಕರೆ ಕಾಯಿಲೆ ಇರುವವರು ಬಾಳೆಹಣ್ಣು ತಿನ್ನಬಹುದಾ? ಇಲ್ಲಿದೆ ನೋಡಿ ಉತ್ತರ
ಈ ಮಧ್ಯೆ, ರೇಣುಕಾಸ್ವಾಮಿ ಶವ ಸಾಗಿಸಲು ಪುನೀತ್ ಎಂಬುವವರ ಸ್ಕಾರ್ಪಿಯೋ ಬಳಸಲಾಗಿತ್ತು. ಹೀಗಾಗಿ ಪುನೀತ್ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ, ರಾಘವೇಂದ್ರ ಸೇರಿ ಕೆಲ ಆರೋಪಿಗಳನ್ನು ಮಹಜರಿಗಾಗಿ ಪೊಲೀಸರು ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. ಬಂಧಿತರ ಪೈಕಿ ಪ್ರದೋಶ್, ದರ್ಶನ್ ಜೊತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ. ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದ, ದರ್ಶನ್ ಮ್ಯಾನೇಜರ್ ನಾಗರಾಜ್ ಇತ್ತೀಚಿಗೆ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ. ರಾಜ್ಯ ಕುರುಬರ ಸಂಘದ ನಿರ್ದೇಶನಕನೂ ಆಗಿದ್ದ. ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದ ಎಂಬ ವಿಚಾರ ಗೊತ್ತಾಗಿದೆ.