ಬೆಂಗಳೂರು:- ಗೃಹಲಕ್ಷ್ಮಿ ಯೋಜನೆಗೆ ತಾಂತ್ರಿಕ ಸಮಸ್ಯೆ ಬೆನ್ನಿಗಂಟಿದ ಬೇತಾಳದಂತಾಗಿದ್ದು, ಇದರ ಪರಿಣಾಮದಿಮದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಗೃಹಿಣಿಯರ ಖಾತೆ ಸೇರಿಲ್ಲ.
ರಾಜ್ಯಪಾಲರ ವಿರುದ್ಧ ಸಿಎಂ ದೂರು ಕೊಟ್ಟರೆ ತಪ್ಪೇನು!?: ಸಚಿವ ಸಂತೋಷ್ ಲಾಡ್ ಪ್ರಶ್ನೆ!
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೆ ತಾಂತ್ರಿಕ ದೋಷ ಶುರುವಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ 80 ಸಾವಿರಕ್ಕೂ ಹೆಚ್ಚು ಮಂದಿಗೆ ಗೃಹಲಕ್ಷ್ಮಿಯರಿಗೆ ಹಣ ತಲುಪಿಲ್ಲ. ಅಂದಹಾಗೇ ಕಳೆದ ಎಲೆಕ್ಷನ್ ಬಳಿಕ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕಿರಲಿಲ್ಲ. ಮೂರು ತಿಂಗಳ ಬಳಿಕ ಜೂನ್ ತಿಂಗಳ ಗೃಹಲಕ್ಷ್ಮಿ ಹಣವನ್ನ ಕಳೆದ ತಿಂಗಳಿನಿಂದ ಹಾಕಲಾಗುತ್ತಿದೆ. ಆದರೆ ಹಣ ಹಾಕುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು, ಒಟ್ಟು 80 ಸಾವಿರ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿಯ ಹಣವೇ ಬಂದಿಲ್ಲ.
ಸದ್ಯ ಗೃಹಲಕ್ಷ್ಮಿಯಲ್ಲಿ 1 ಕೋಟಿ 23 ಲಕ್ಷ ಗೃಹಲಕ್ಷ್ಮಿ ಫಾಲಾನುಭವಿಗಳಿದ್ದು, 90 ಲಕ್ಷ ಜನರ ಖಾತೆಗೆ ಮಾತ್ರ ಹಣ ಜಮಾವಣೆಯಾಗಿದೆ. ಉಳಿದ 80 ಸಾವಿರ ಜನರ ಖಾತೆಯ ತಾಂತ್ರಿಕ ಸಮಸ್ಯೆಗಳನ್ನ ಬಗೆಹರಿಸಿ, ಬಲಿಕ ಹಣ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.
ಇನ್ನು ಕಳೆದ ತಿಂಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಖಾತೆಗೆ ಹಣ ಬರುತ್ತೆ ಎಂದು ಹೇಳಿದ ಮೇಲೆ ಸಾಕಷ್ಟು ಮಹಿಳೆಯರು ಬ್ಯಾಂಕ್ಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ಕೆಲವೊಂದಿಷ್ಟು ಜನರಿಗೆ ಹಣ ಬಂದಿದ್ದರೆ, ಇನ್ನೊಂದಿಷ್ಟು ಮಂದಿಗೆ ಬಂದಿಲ್ಲ. ಹೀಗಾಗಿ ಪ್ರತಿದಿನ ಬ್ಯಾಂಕ್ ಅಲೆದಾಡುತ್ತಿದ್ದು, ಈ ಯೋಜನೆಗಳ ಸಹವಾಸವೇ ಬೇಡ ಅಂತ ಗೃಹಿಣಿಯರು ಆಕ್ರೋಶ ಹೊರಹಾಕಿದ್ದಾರೆ.