ಗದಗ: ರಾಜ್ಯಾದ್ಯಂತ ಬರಗಾಲ ತೀವ್ರವಾಗಿ ಕಾಡುತ್ತಿರುವುದರಿಂದ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಜನರು ಕೆಲಸವಿಲ್ಲದೆ ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ನರೇಗಾ ಆರಂಭಿಸಿ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡುತ್ತಿದ್ದು,
ಇದರ ಪ್ರಯುಕ್ತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮ ಪಂಚಾಯತಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ ಎಚ್ ರವರು ಸಾಮೂಹಿಕ ಬುದು ನಿರ್ಮಾಣ ಕಾಮಗಾರಿ ಆರಂಭಿಸಿದ್ದು ಕೂಲಿ ಕೆಲಸಕ್ಕಾಗಿ ಮಹಿಳೆಯರು ಪುರುಷರು ಬಿಸಿಲಿನ ತಾಪದಲ್ಲಿ ಕೂಡ ಅತಿ ಉತ್ಸಾಹದಿಂದ 550 ಜನ ಕೂಲಿಕಾರರು ಹಾಜರಾಗಿ ಉದ್ಯೋಗ ಖಾತ್ರಿಯ ಲಾಭ ಪಡೆದರು.
ಈ ಸಂದರ್ಭದಲ್ಲಿ ಕೂಲಿಕಾರರಿಗೆ ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲು ಮತ್ತು ಮತದಾನ ಮಾಡಿಸುವಂತೆ ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯ ಮತದಾನಕ್ಕಾಗಿ ಮತದಾರರ ಪ್ರತಿಜ್ಞಾ ವಿಧಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಮೇಟಿ ಅವರು ಬೋಧಿಸಿದರು. ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಮಹತ್ವದ ಕುರಿತು ಕೂಲಿಕಾರರಿಗೆ ತಾಲೂಕ ತಾಂತ್ರಿಕ ಸಂಯೋಜಕರಾದ ಹರೀಶ್ ಸೊಬರದ ರವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕರಾದ ಜ್ಯೋತಿ ಕೋಡಂಗಲ್, ಬಿ ಎಫ್ ಟಿ. ಎಚ್.ಎಸ್. ನಾಯಕ್, ಗ್ರಾಮ ಕಾಯಕ ಮಿತ್ರ ಪುಷ್ಪಾಂಜಲಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಣಜಿ, ಉಪಾಧ್ಯಕ್ಷರಾದ ತಿಪ್ಪವ್ವ ತಳವಾರ, ಕಾರ್ಯದರ್ಶಿ ಎಸ್ಎಫ್ ತಿಮ್ಮಶೆಟ್ಟಿ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಭೀಮಣ್ಣ ಉಡುಚಣ್ಣವರ, ಈರಣ್ಣ ತಳವಾರ, ಮಲ್ಲಪ್ಪ ತಳವಾರ, ಸುರೇಶ ಬಂಡಿವಡ್ಡರ, ಶರಣಪ್ಪ ಪೂಜಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.