ಗದಗ:- ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು ಬಿದ್ದಿರುವ ಘಟನೆ ಗದಗ-ಬೆಟಗೇರಿಯ ಸೆಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದೆ.
Crime News: ರಾಡು, ಡ್ರ್ಯಾಗರ್ ನಿಂದ ಸಿಕ್ಕ ಸಿಕ್ಕವರಿಗೆ ಚುಚ್ಚಿ ರಂಪಾಟ: ವ್ಯಕ್ತಿ ನಿಯಂತ್ರಿಸಲು ಪೊಲೀಸರೇ ಸುಸ್ತು!
ಇನ್ನು ಶ್ರಾವಣ ಮಾಸದಲ್ಲಿ ಹೆಚ್ಚಿನ ಮಕ್ಕಳು ಕಟಿಂಗ್ ಮಾಡಿಸುವುದಿಲ್ಲ. ಹೀಗಾಗಿ ಮಕ್ಕಳು ಕೂಡ ಕಟಿಂಗ್ ಮಾಡಿಸಿಲ್ಲ, ಅದನ್ನು ಪೋಷಕರ ಗಮನಕ್ಕೆ ತಂದು ಕಟಿಂಗ್ ಮಾಡಿಸಲು ಹೇಳಬೇಕು. ಅದನ್ನು ಬಿಟ್ಟು ಇವರೇ ಕಟಿಂಗ್ ಮಾಡಿದ್ರೆ ಹೇಗೆ ಎಂದು ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಅವರು ಶಾಲೆಗೆ ಬಂದು ಕೂದಲು ಕಟ್ ಮಾಡಿದ ಶಿಕ್ಷಕನನ್ನು ವಿಚಾರಣೆ ಮಾಡಿದರು. ಆದ್ರೆ, ಪೋಷಕರು ಈ ಶಿಕ್ಷಕ ನಮ್ಮ ಶಾಲೆಗೆ ಬೇಡ ಎಂದು ಒತ್ತಾಯಿಸಿ ಗಲಾಟೆ ಮಾಡಿ, ಶಾಲಾ ಆಡಳಿತ ಮಂಡಳಿ ಶಿಕ್ಷಕನ್ನು ಈ ಶಾಲೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಶಾಲಾ ಆಡಳಿತ ಮಂಡಳಿಯಿಂದ ದುರ್ವವರ್ತನೆ ಕುರಿತು ಪತ್ರವನ್ನು ಪಡೆದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಹೇಳಿದರು. ಮಕ್ಕಳಿಗೆ ಪಾಠ ಮಾಡೋದನ್ನು ಬಿಟ್ಟು, ನೀವು ಕಟಿಂಗ್ ಶಾಪ್ ಈಡಿ ಎಂದು ಪೋಷಕರು ಕಿಡಿಕಾರಿದರು. ದುರ್ವವರ್ತನೆ ತೋರಿದ ಶಿಕ್ಷನಿಗೆ ಧರ್ಮದೇಟು ಬಿದ್ದ ಕೂಡಲೇ, ಶಾಲೆಗೆ ಪೊಲೀಸರು ಆಗಮಿಸಿ ಕೂದಲು ಕಟ್ ಮಾಡಿದ ಶಿಕ್ಷಕನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.