ಆನೇಕಲ್: ಆನೇಕಲ್ನ ಕೋರ್ಟ್ ಹಿಂಭಾಗದಲ್ಲಿ ಗ್ಯಾರೇಜ್ನಿಂದ ಮನೆಗೆ ಟಾಟಾ ಇಂಡಿಕಾ ಕಾರು ತರುವಾಗ ಹೊತ್ತಿ ಉರಿದ ಘಟನೆ ನಡೆದಿದೆ.
ಉಚಿತ ಗ್ಯಾರಂಟಿಗಳು ಬಂದ್ ಆಗುತ್ತಾ!?: CM ಸಿದ್ದರಾಮಯ್ಯ ಕೊಟ್ರೂ ಸ್ಪಷ್ಟನೆ!
ಕೋರ್ಟ್ ಹಿಂಭಾಗದ ಸರ್ಕಾರಿ ಸಾರ್ವಜನಿಕ ಬಾಲಕರ ವಿಧ್ಯಾರ್ಥಿ ನಿಲಯದ ಬಳಿ ಬರುತ್ತಿದ್ದಂತೆ ಧಿಡೀರನೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಧಗಧಗನೇ ಸುಟ್ಟು ಕರಕಲಾಗಿದೆ.
ಕಾರಿನಿಂದ ಇಳಿದು ಚಾಲಕ ಬಚಾವ್ ಆಗಿದ್ದಾನೆ. ಗ್ಯಾರೇಜ್ ನಿಂದ ಮನೆಗೆ ತೆಗೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ತಂಡ ಆಗಮಿಸಿ ಬೆಂಕಿ ನಂದಿಸಿದ್ದಾರೆ.