ಕಲಬುರಗಿ: ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಎಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರನ ಮಠದಲ್ಲಿ ತನಾರತಿ ಉತ್ಸವ ಜೋರಾಗಿ ನಡೆಯಿತು..
ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸಲ್ಲಿಸುವ ಭಕ್ತರು ಅವತ್ರಮಾಸೆಯ ದಿನ ಬಂದು ತಲೆ ಮೇಲೆ ಆರತಿ ಹೊತ್ತು ಐದು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಈ ಪದ್ದತಿಗೆ ತನುವಿನ ಆರತಿ ಅಂದ್ರೆ ತನಾರತಿ ಅಂತ ಕರೆಯುತ್ತಾರೆ..
ಈ ಉತ್ಸವಕ್ಕೆ ಮಠದ ಪೀಠಾಧಿಪತಿ ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದ್ರು.ಹೀಗೆ ಅಮವಾಸೆ ದಿನ ದೀಪೋತ್ಸವ ಮರುದಿನ ರಥೋತ್ಸವ ನಡೆಯುವುದು ಸಂಪ್ರದಾಯ.. ಇಂತಹ ಭಕ್ತಿಭಾವದ ಜಾತ್ರೆಗೆ ಅಪಾರ ಜನಸ್ತೋಮ ಸಾಕ್ಷಿಯಾಗೋದು ವಿಶೇಷ..