ಹುಬ್ಬಳ್ಳಿ: ನನ್ನ ವಿರುದ್ದ ಪ್ರತಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದಿದೆ. ಪ್ರತಿ ಸಾರಿ ಷಡ್ಯಂತ್ರ ಮೀರಿ ನನಗೆ ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಸಾರಿ ಚುನಾವಣೆಯಲ್ಲಿ ಷಡ್ಯಂತ್ರ ನಡೆಸಿದರೂ ಸಹ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಕಳೆದ ಬಾರಿ ಪಿಎಂ ಅಭ್ಯರ್ಥಿಯಾಗಿ ನ್ಯಾಯ ಅಂತ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಘೋಷಣೆ ಮಾಡಿ ಇವರು ಯಾವತ್ತೂ ನ್ಯಾಯ ಕೊಟ್ಟಿಲ್ಲ ಎಂದು ದೂರಿದರು.
ತೆರೆಗೆ ಬರಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸಿನಿಮಾ…! ನಿರ್ದೇಶನ ಮಾಡುತ್ತಿರುವುದು ಯಾರು?
ಕಾಂಗ್ರೆಸ್’ನವರು ಭ್ರಷ್ಟಾಚಾರ ಮಾಡಿದ್ದರು. ಇವರು ಬಡವರಿಗೆ ಏನೂ ಕೊಟ್ಟಿಲ್ಲ. ಇವರೇನು ಮಾಡಿದ್ರು ಜನ ಇವರನ್ನು ನಂಬಲ್ಲ. ಅಧಿಕಾರಕ್ಕೆ ಬರಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ತನ್ನ ಪ್ರಾಣಾಳಿಕೆಯಲ್ಲಿ ಬೇಕಾಬಿಟ್ಟಿಯಾಗಿ ಘೋಷಣೆ ಮಾಡತ್ತಿದ್ದಾರೆ ಎಂದರು.
ಪುಲ್ವಾಮಾ ದಾಳಿ, ಅಕ್ಕಿ ಬಗ್ಗೆ ಮಾತಾಡಿದಾಗ ನನಗೆ ಕನಿಕರ ಉಂಟಾಗತ್ತೆ. ಪುಲ್ವಾಮಾ ದಾಳಿ ವೇಳೆ ಅಭಿನಂದನ್ ಸಿಕ್ಕಿ ಹಾಕಿಕೊಂಡಾಗ ಕಾಂಗ್ರೆಸ್ ಗೆ ಖುಷಿಯಾಗಿತ್ತು. ಅವರನ್ನು ಪಾಕಿಸ್ತಾನದವರು ಸಾಯಸ್ತಾರೆ. ಅದನ್ನು ಮೋದಿ ತಲೆಗೆ ಕಟ್ಟೋಕೆ ಕಾಯತಿದ್ದರು. ಆದರೆ ಮೋದಿ ಅದಕ್ಕಿಂತ ಮುಂಚೆ ಹೋಗಿ ಎಚ್ಚರಿಕೆ ನೀಡಿದರು. ಇದು ಕಾಂಗ್ರೆಸ್ ಗೆ ತಿಳಿಯಲ್ಲ ಎಂದು ಹರಿಹಾಯ್ದರು.