ಬೆಂಗಳೂರು:- ಮುಡಾ ಹಗರಣ ದಿನಕ್ಕೊಂದು ಕಾವು ಪಡೆದುಕೊಳ್ತಿರುವ ಹೊತ್ತಲ್ಲಿ ವಿಪಕ್ಷ ನಾಯಕ ಅಶೋಕ್ ವಿರುದ್ಧ ಜಮೀನು ಹಗರಣವೊಂದು ಬ್ಲಾಸ್ಟ್ ಆಗಿದೆ. ಕಾಂಗ್ರೆಸ್ ಹಿರಿಯ ಸಚಿವರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಹೆಚ್ಕೆ ಪಾಟೀಲ್ ಜಂಟಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆಗಳ ಸಮೇತ ದಾಳಿ ನಡೆಸಿದ್ದಾರೆ.
Rain News: ಮುಂದಿನ ಒಂದು ವಾರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ!
ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ಹಗರಣ ನಡೆದಿದ್ದು ಅದನ್ನು ದಾಖಲೆ ಸಮೇತ ಹೇಳುತ್ತೇವೆ ಅಂತ ಸಚಿವ ಪರಮೇಶ್ವರ್ ಪುರಾಣ ಕೆದಕಿದ್ದಾರೆ. ಲೊಟ್ಟೆಗೊಲ್ಲಹಳ್ಳಿಯ ಸರ್ವೇ ನಂಬರ್ 10/11 ಎಫ್ 1 ಹಾಗೂ ಎಫ್ 2ರಲ್ಲಿರುವ ಜಮೀನು ಹಗರಣ ನಡೆದಿದೆ. ಬಿಡಿಎ ಭೂಮಿ ಸ್ವಾಧೀನಪಡಿಸಿಕೊಂಡು ಪುನಃ ಭೂಮಿ ವಾಪಸ್ ನೀಡಿದ ಬಗ್ಗೆ ಮಾತನಾಡಬೇಕು ಅಂತ ಆರ್.ಅಶೋಕ್ ಸೇರಿ ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ಇದೆಲ್ಲದರ ಕುರಿತು ಇಂದು ಬೆಳಿಗ್ಗೆ 9:45ಕ್ಕೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಒಟ್ಟಾರೆ ಮುಡಾ ಹಗರಣ ಸಂಬಂಧ ದಿನಕ್ಕೊಂದು ಬೆಳವಣಿಗೆಯಾಗುತ್ತಿರುವಾಗಲೇ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧವೂ ಭೂವಿವಾದ ಸುತ್ತಿಕೊಂಡಿದೆ. ಈ ಬಗ್ಗೆ ಇಂದು ಅದ್ಯಾವ ಸ್ಪಷ್ಟನೆ ಕೊಡ್ತಾರೋ ಕಾದು ನೋಡ್ಬೇಕು.