ಬಾಗಲಕೋಟ: ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ವಜ್ಜರಮಟ್ಟಿ ಗ್ರಾಮದಲ್ಲಿ ಜರುಗಿದೆ.
ಮಹಾದೇವಿ ಕಟ್ಟಿಮನಿ (22) ಮೃತ ಮಹಿಳೆ. 4 ತಿಂಗಳ ಹಿಂದೆ ಹೆಬ್ಬಾಳೆಪ್ಪ ಅವರಾದಿ ಜೊತೆ ಮಹಾದೇವ್ ಮದುವೆ ಆಗಿದ್ದ. ಮಹಾದೇವಿ ಮೂಲತಃ ಮಂಟೂರು ಗ್ರಾಮದ ನಿವಾಸಿ ಎನ್ನಲಾಗಿದೆ.
ಮಜ್ಜರಮಟ್ಟಿ, ಮಂಟೂರು ಗ್ರಾಮದಲ್ಲಿ ಘಟನೆ ಜರುಗಿದೆ. ಮದುವೆ ಆಗಿ ನಾಲ್ಕೇ ತಿಂಗಳಲ್ಲಿ ದುರಂತ ಸಾವು ಸಂಭವಿಸಿದೆ. ಗಂಡ ಹೆಬ್ಬಾಳೆಪ್ಪ ಪತ್ನಿ ಮಹಾದೇವಿ ಮೇಲೆ ಅನುಮಾನ ಪಡುತ್ತಿದ್ದ. ಸಾವಿಗೆ ಗಂಡ ಹೆಬ್ಬಾಳೆಪ್ಪನೇ ಕಾರಣ ಎಂದು ಮಹಾದೇವಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮುಧೋಳ ನಗರದ ಖಾಸಗಿ ಆಸ್ಪತ್ರೆ ಮುಂದೆ ಜನತೆ ಜಮಾಯಿಸಿದ್ದಾರೆ. ಮಗಳ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೈಕ್ ಮೇಲಿಂದ ಬಿದ್ದಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿರೋದಾಗಿ ಗಂಡ ಹೆಬ್ಬಾಳೆಪ್ಪ ಹೇಳಿದ್ದಾರೆ.
ಸ್ಥಳಕ್ಕೆ ಜಮಖಂಡಿ ವಿಭಾಗದ ಡಿಎಸ್ಪಿ ಶಾಂತವೀರ ಭೇಟಿ ಪರಿಶೀಲನೆ ಮಾಡಿದ್ದು, ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.