ಅಪ್ಘಾನ್ Vs ಭಾರತ ಪಂದ್ಯದ ವೇಳೆ ಕಿರಿಕ್ ಆಗಿದ್ದು, ಸೂರ್ಯನ ಹೊಡೆತಕ್ಕೆ ರಶೀದ್ ಕೋಪಪಟ್ಟ ಘಟನೆ ಜರುಗಿದೆ.
Siddaramaiah: ಯಾವುದೆ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಸಧ್ಯಕ್ಕಿಲ್ಲ – ಸಿದ್ದರಾಮಯ್ಯ!
ನಿನ್ನೆ ಅಪ್ಘಾನಿಸ್ತಾನ ತಂಡವನ್ನು ರೋಹಿತ್ ಶರ್ಮಾ ಪಡೆ ಮಣಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ. ಈ ಪಂದ್ಯದ ವೇಳೆ ಸೂರ್ಯಕುಮಾರ್ ಹಾಗೂ ರಶೀದ್ ಖಾನ್ ಮಧ್ಯೆ ಕಿರಿಕ್ ಆಗಿತ್ತು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಶೀದ್ ಖಾನ್ ಅವರು ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಓವರ್ನಲ್ಲಿ ನೀಡಿದ್ದು ಕೇವಲ 26 ರನ್ಗಳು. ಇಷ್ಟೇ ಅಲ್ಲ ರಿಷಭ್ ಪಂತ್, ವಿರಾಟ್ ಕೊಹ್ಲಿ, ಶಿವಮ್ ದೂಬೆ ವಿಕೆಟ್ನ ಪಡೆದು ತಂಡಕ್ಕೆ ನೆರವಾದರು. ಸೂರ್ಯಕುಮಾರ್ ಯಾದವ್ಗೆ ಬೌಲ್ ಹಾಕುವಾಗ ಮಾತ್ರ ರಶೀದ್ ಖಾನ್ ವಿಫಲರಾಗುತ್ತಿದ್ದರು. ರಶೀದ್ ಖಾನ್ ಅವರು ಎಸೆದ ಬಾಲ್ಗಳಲ್ಲಿ ಆರು ಬೌಲ್ಗಳನ್ನು ಸೂರ್ಯ ಅವರು ಎದುರಿಸಿದರು. ಈ ಪೈಕಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿದರು. ಎಲ್ಲವೂ ಸ್ವೀಪ್ ಶಾಟ್ನಲ್ಲೇ ಹೊಡೆದರು. ಹೀಗಾಗಿ, ಪಂದ್ಯದ ಮಧ್ಯೆ ಇಬ್ಬರೂ ಮಾತುಕತೆ ನಡೆಸಿಕೊಂಡಿದ್ದಾರೆ. ಈ ವಿಡಿಯೋನ ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಕೆಲವರು ಇದನ್ನು ಮಾತಿನ ಚಕಮಕಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಇದನ್ನು ಗೆಳೆತನದಲ್ಲಿ ನಡೆದ ಮಾತುಕತೆ ಎಂದಿದ್ದಾರೆ