ಬೀದರ್: ದೇಶದಲ್ಲಿ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಕಲಬುರಗಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆ ಹೆಣ್ಣು ಮಕ್ಕಳನ್ನೂ ಹೊತ್ತುಕೊಂಡು ಹೋಗುತ್ತಾರೆ. ಕಲಬುರಗಿಯಲ್ಲಿ ಹಿಂದೂ ಹುಡುಗಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಆ ಪ್ರಕರಣವನ್ನ ಸಚಿವರು ಮುಚ್ಚಿ ಹಾಕೋಕೆ ನೋಡ್ತಿದ್ದಾರೆ. ಸಾಬರದ್ದೇ ಕಾಂಗ್ರೆಸ್, ರಾಜ್ಯದಲ್ಲಿ ಪಾಕಿಸ್ತಾನ ಸರ್ಕಾರ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
10th ಪಾಸಾದವರಿಗೆ ಗುಡ್ʼನ್ಯೂಸ್: ಭಾರತೀಯ ನೌಕಾಪಡೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಹಿಂದೂಗಳ ಸಾವಾದಾಗ ಕಾಂಗ್ರೆಸ್ನವರು ಮನೆಗೆ ತೆರಳಿ ಸಮಾಧಾನ ಹೇಳುವುದಿಲ್ಲ. ಅದೇ ಒಬ್ಬ ಮುಸ್ಲಿಂ ಸತ್ತರೇ ರಾಹುಲ್ ಗಾಂಧಿ ಮನೆಗೆ ಹೋಗುತ್ತಿದ್ದರು ಎಂದು ಆರೋಪ ಮಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಕೈ ನಾಯಕರು ಚೊಂಬು ಹಿಡಿದುಕೊಂಡು ಮನೆಗೆ ಹೋಗಿತ್ತಾರೆ. ಕಾಂಗ್ರೆಸ್ ಉಸ್ತುವಾರಿ ಸಚಿವ ಸುರ್ಜೇವಾಲಾ ಅರೆ ಹುಚ್ಚ ಕಲೆಕ್ಷನ್ ಮಾಸ್ಟರ್, ದಲ್ಲಾಳಿ ಎಂದು ಕಿಡಿಕಾರಿದರು.