ಬೆಂಗಳೂರು: ಗಣಿಗಾರಿಕೆ ಮಾಡಲು ಸರ್ಕಾರದ ಸಂಸ್ಥೆಯ ಜೊತೆ ಸಹಿ ಹಾಕಲಾಗಿದೆ. ಅವರು ಕಿಕ್ಬ್ಯಾಕ್ ನೀಡುವುದಿಲ್ಲ ಎಂದು ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಹೇಳಿದ್ದಾರೆ. ಬಳ್ಳಾರಿಯ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಕೇಂದ್ರ ಸರ್ಕಾರದ ಅನುಮತಿ ಬೆನ್ನಲ್ಲೇ ರಾಜ್ಯ ಸರ್ಕಾರ ತಡೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು.
ಖಾಸಗಿ ಅವರಿಗೆ ಕೊಡುವ ಆಸಕ್ತಿ, ಸರ್ಕಾರಿ ಸಂಸ್ಥೆಗೆ ಕೊಡುವ ಆಸಕ್ತಿ ಯಾಕಿಲ್ಲ? ಜಿಂದಾಲ್ ಕನ್ನಡಿಗರಿಗೇ ಉದ್ಯೋಗ ನೀಡುತ್ತೇವೆ ಎಂದರು. ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ತಡೆ ಹಿಡಿದಿರುವುದು ನೋಡಿದರೆ ಇವರು ಸೂಟ್ಕೇಸ್ ಕೊಡಲಿ ಎಂಬ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಬಿಸಾಕುವುದಿಲ್ಲ..!
ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಪಾಪ ಪುಣ್ಯ ನಮಗೆ ಗೊತ್ತಿಲ್ಲ. ಅದು ಅಂತರಾತ್ಮ ಹಾಗೂ ಪರಮಾತ್ಮನಿಗೆ ಮಾತ್ರವೇ ಗೊತ್ತಿರುತ್ತದೆ. ನಾವು ಏನು ಹೇಳಲು ಬರುವುದಿಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಆದರೆ ಪಾಪ ಪುಣ್ಯದ ಪ್ರಶ್ನೆ ಬಂದರೆ ಅದು ನಮಗೆ ಸಂಬಂಧಪಡುವುದಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಗುವುದಿಲ್ಲ ಎಂದರು.