ಮಂಡ್ಯ: ಸೂರಜ್ ರೇವಣ್ಣ ಕೇಸ್ ವಿಚಾರ ನಮಗೂ ಮುಜುಗರ ತಂದಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇದೆ, ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ನಮಗೂ ಇದರ ಬಗ್ಗೆ ಮುಜುಗರ ಇದೆ ಎಂದರು.
Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಬಿಸಾಕುವುದಿಲ್ಲ..!
ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಸೂರಜ್ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಏನು ಮಾಡುವುದು. ಇದು ನಮ್ಮ ಕೈಯಲ್ಲಿ ಇದಿಯಾ? ಇದನ್ನ ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಬ್ಬರು ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ಆಗುತ್ತೆ. ಕೇಸ್ ಅಂಡ್ ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಏನು ಬರುತ್ತದೆ ಎಂದು ಪ್ರಶ್ನಿಸಿದರು.