ಬೆಂಗಳೂರು:- ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂನ ಸಾಯಿಕೃಪಾ ಅಪಾರ್ಟ್ಮೆಂಟ್ನಲ್ಲಿ ಮಹಿಳೆ ಸೂಸೈಡ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸ್ ತನಿಖೆಯಲ್ಲಿ ಆತ್ಮಹತ್ಯೆಗೆ ಕಾರಣ ಏನೆಂಬುವುದು ಬಟಾ ಬಯಲಾಗಿದೆ.
ಬಿಸ್ಕೆಟ್ ತಿಂದು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು! ಅಷ್ಟಕ್ಕೂ ಆ ಶಾಲೆಯಲ್ಲಿ ಆಗಿದ್ದೇನು?
ಕಳೆದ ಕೆಲ ದಿನಗಳ ಹಿಂದೆ 46 ವರ್ಷದ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೆಲ ವರ್ಷಗಳ ಹಿಂದೆ ಜಯಶ್ರಿ ಅಕ್ಕ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಕ್ಕ ಮೃತಪಟ್ಟ ಬಳಿಕ ಮಕ್ಕಳ ಪೋಷಣೆಗೆಂದು ಕುಟುಂಬಸ್ಥರು ಜಯಶ್ರೀಯ ಬಾವ ಚನ್ನೇಗೌಡನ ಜೊತೆಗೆ ಮದುವೆ ಮಾಡಿಸಿದರು.
ದಂಪತಿ ಮೂರು ಮಕ್ಕಳೊಂದಿಗೆ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ಪತಿ ಚನ್ನೇಗೌಡ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಜಯಶ್ರೀಗೆ ಚನ್ನಪಟ್ಟಣದಲ್ಲಿರಲು ಇಷ್ಟವಿರಲಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ವಾಸಿಸಲು ಮನಸ್ಸು ಇತ್ತು.
ಈ ಕಾರಣಕ್ಕಾಗಿ ಜಯಶ್ರೀ ಪತಿ ಚನ್ನೇಗೌಡನ ಜೊತೆ ಜಗಳವಾಡುತ್ತಿದ್ದಳು. ಬೆಂಗಳೂರಿನಲ್ಲೇ ವಾಸಿಸಬೇಕೆಂದು ಹಠ ಹಿಡಿದಿದ್ದ ಜಯಶ್ರೀ ಇದಕ್ಕಾಗಿ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಳು. ಬೆಂಗಳೂರು ಸಿಟಿ ಲೈಫ್ ಜೀವನ ನಡೆಸಲು ಹಣಕ್ಕಾಗಿ ನಾನಾ ದಾರಿಗಳನ್ನು ಹುಡುಕಿಕೊಂಡಿದ್ದಳು.
ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜಯಶ್ರಿ ಹಣ ಪಡೆದು ವಂಚಿಸಿದ್ದಳು. ಈ ವಿಚಾರ ತಿಳಿದ ಪತಿ ಚನ್ನೇಗೌಡ ಎಲ್ಲವನ್ನೂ ಬಗೆಹರಿಸಿ, ಸರಿ ಪಡಿಸಿದ್ದರು.
ಇದಾದ ಬಳಿಕವೂ ಜಯಶ್ರೀಗೆ ಸಿಟಿ ಲೈಫ್ನ ಆಸೆ ಕಡಿಮೆ ಆಗಿರಲಿಲ್ಲ. ಸಿಟಿಯಲ್ಲೇ ವಾಸಿಸಬೇಕೆಂದು 3-4 ಬಾರಿ ಮನೆ ಬಿಟ್ಟು ಬಂದಿದ್ದಳು. ಮೂರು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿ ವಾಪಾಸ್ ಆಗಿದ್ದಳು.
ಜಯಶ್ರೀ ಮತ್ತೆ ಇತ್ತೀಚಿಗೆ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು. ಹೊದವಳು ಮತ್ತೆ ಬರುತ್ತಾಳೆ ಎಂದು ಪತಿ ಚನ್ನೇಗೌಡ ಸುಮ್ಮನಾಗಿದ್ದರು.
ಚಿನ್ನದ ಆಭರಣವೊಂದನ್ನ ಅಡವಿಟ್ಟು, ಬಂದ ಹಣದಲ್ಲಿ ಬೆಂಗಳೂರಿಗೆ ಬಂದಿದ್ದ ಜಯಶ್ರೀ, ಎರಡು ದಿನ ಮೆಜೆಸ್ಟಿಕ್ನಲ್ಲಿ ಕಾಲ ಕಳೆದಿದ್ದಳು. ಮೆಜೆಸ್ಟಿಕ್ನಲ್ಲಿ ಜಯಶ್ರೀಗೆ ಓರ್ವ ಮಹಿಳೆಯ ಪರಿಚಯವಾಗಿದೆ. ಮಹಿಳೆ ಎದರು ತಾನು ಮನೆ ಬಿಟ್ಟು ಬಂದಿರುವುದು, ಗಂಡನ ಜೊತೆ ಜಗಳವಾಡಿದ್ದನ್ನು ಹೇಳಿಕೊಂಡಿದ್ದಾಳೆ. ಬಳಿಕ ಅದೇನು ತಿಳಿಯಿತು ಏನೋ ಆಗಸ್ಟ್ 6 ರಂದು ಮಲ್ಲೇಶ್ವರಂನ ಸಾಯಿಕೃಪಾ ಅಪಾರ್ಟ್ಮೆಂಟ್ನಲ್ಲಿ ಸಿಸಿಟಿವಿ, ಸೆಕ್ಯೂರಿಟಿ ಇಲ್ಲದೆ ಇರುವುದನ್ನು ಬೆಳಗ್ಗೆ 7:30ರ ಸುಮಾರಿಗೆ 3 ಮತ್ತು 4ನೇ ಮಹಡಿ ಮಧ್ಯದ ಮೆಟ್ಟಿಲುಗಳ ಬಳಿ ಇರುವ ಗ್ರೀಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.