ನೀವು ಕೂಡಾ ತಲೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ. ಕೆಲವು ಬೀಜಗಳನ್ನು ನಿತ್ಯ ಸೇವಿಸಿದರೆ ಕೂದಲು ಉದುರುವ ಸಮಸ್ಯೆ ಶಾಶ್ವತವಾಗಿ ನಿಲ್ಲುತ್ತದೆ.
ಮೆಂತ್ಯೆಯನ್ನು ತಿನ್ನುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.ಮೆಂತ್ಯೆಯನ್ನು ರಾತ್ರಿಯಿಡೀ ನೀರಿನಲ್ಲಿ ಹಾಕಿ ನೆನೆಸಿಡಿ. ನಂತರ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳನ್ನು ಜಗಿದು ತಿನ್ನಬೇಕು ಮಾತ್ರವಲ್ಲ ಕಾಳು ಗಳನ್ನು ನೆನೆಸಿಟ್ಟ ನೀರನ್ನು ಕೂಡಾ ಕುಡಿಯಬೇಕು. ಮೆಂತ್ಯೆಯಲ್ಲಿರುವ ಕಬ್ಬಿಣದ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಈ ಕಾರಣದಿಂದಾಗಿ, ಕೂದಲು ಮತ್ತು ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ.
ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣದ ಅಂಶವು ಹೇರಳವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲು ಮತ್ತು ಮುಖಕ್ಕೂ ಹೊಳಪನ್ನು ನೀಡುತ್ತದೆ. ಕುಂಬಳಕಾಯಿ ಬೀಜಗಳಲ್ಲಿ ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದನ್ನು ಒಣ ಹಣ್ಣುಗಳು ಅಥವಾ ತರಕಾರಿಗಳೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ತಿನ್ನಬೇಕು.
ಅಗಸೆ ಬೀಜಗಳಲ್ಲಿ ಪ್ರೋಟೀನ್, ಒಮೆಗಾ, ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಪ್ರತಿನಿತ್ಯ ಇದನ್ನು ತಿಂದರೆ ಕೂದಲಿಗೆ ಅಗತ್ಯ ಪೋಷಣೆ ಸಿಗುತ್ತದೆ. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮಾತ್ರವಲ್ಲ ಉದುರಿದ ಕೂದಲಿನ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಅಗಸೆ ಬೀಜಗಳು ಕೂದಲಿಗೆ ಮಾತ್ರವಲ್ಲ ಮುಖಕ್ಕೂ ಲಾಭ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡಾ ಇದು ಪರಿಣಾಮಕಾರಿಯಾಗಿದೆ..
ಎಳ್ಳು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದು ಹೇರ್ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಕಪ್ಪು ಎಳ್ಳು ವಿಟಮಿನ್-ಬಿ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಕೂದಲು ಬಿಳಿಯಾಗುವುದನ್ನು ಕೂಡಾ ತಡೆಯುತ್ತದೆ. ಇದರ ವಿಟಮಿನ್ ಇ ಮತ್ತು ಲಿಗ್ನಾನ್ ಅಂಶವು ಚರ್ಮವನ್ನು ಪೋಷಿಸುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಎಳ್ಳು ಒಂದು ರೀತಿಯಲ್ಲಿ ದೇಹದ ಕ್ಯಾಲ್ಸಿಯಂ ಮಟ್ಟವನ್ನು ಸುಧಾರಿಸುತ್ತದೆ
ಸೂರ್ಯಕಾಂತಿ ಬೀಜಗಳು ದೇಹಕ್ಕೆ ತುಂಬಾ ಪೌಷ್ಟಿಕವಾಗಿದೆ.ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಜಿಂಕ್ ಮತ್ತು ಒಮೆಗಾ 3 ಮತ್ತು ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವುದರಿಂದ ಅವು ಕೂದಲನ್ನು ರಕ್ಷಿಸುತ್ತವೆ.