ಬೀದರ್: ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಬೀದರ್ ಲೋಕಸಭಾ ಅಖಾಡದಿಂದ ಅಂಧ ಅಭ್ಯರ್ಥಿಯೊಬ್ಬರು ಉಮೇದುವಾರಿಕೆ (Nomination) ಸಲ್ಲಿಸಿದ್ದಾರೆ.
ಬೀದರ್ನ (Bidar) ಕಾಡವಾಡ ಗ್ರಾಮದವರಾದ ದಿಲೀಪ್ ನಾಗಪ್ಪ ಬೂಸಾ ಎಂಬವರು ಚುನಾವಣಾಧಿಕಾರಿ ಗೋವಿಂದರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಬ್ರೈಲ್ ಲಿಪಿಯ ಸಹಾಯದಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ದಿಲೀಪ್ ಲೋಕಸಭಾ ಕಣಕ್ಕಿಳಿದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಪತ್ನಿ ತನ್ನ ಮಾಜಿ ಪತಿಗೆ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ನೀಡಬೇಕು: ಹೈಕೋರ್ಟ್ ಆದೇಶ
ಘಟಾನುಘಟಿ ಸ್ಪರ್ಧಾಳುಗಳ ನಡುವೆ ಉಮೇದುವಾರಿಕೆ ಸಲ್ಲಿಸಿಸಿರುವ ದಿಲೀಪ್, ರೆಕಾಡಿರ್ಂಗ್ ಸ್ಟುಡಿಯೋ ನಡೆಸುತ್ತಿದ್ದಾರೆ. ಸಂಗೀತದಿಂದಲೇ ತಮ್ಮ ಆದಾಯದ ಮೂಲ ಕಂಡುಕೊಂಡಿದ್ದಾರೆ. ಬೀದರ್ನಲ್ಲಿ ಒಟ್ಟು 17,08,787 ಮತದಾರರಿದ್ದಾರೆ. ಈ ಪೈಕಿ ಪುರುಷ ಮತದಾರರು – 8,89,571 ಇದ್ದರೆ, ಮಹಿಳಾ ಮತದಾರರು – 8,17,396 ಮಂದಿ ಇದ್ದಾರೆ. ಇತರೆ ಮತದಾರರು 50 ಮಂದಿ ಇದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)