ವಿಜಯಪುರ:- ಪ್ರಿನ್ಸಿಪಾಲ್ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಜರುಗಿದೆ.
ಪ್ರಿನ್ಸಿಪಾಲ್ ಸಚಿನ ಪಾಟೀಲ ಬೇಕು ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳು, ತಮ್ಮ ಪ್ರೀತಿಯ ಪ್ರಿನ್ಸಿಪಾಲ್ ವರ್ಗಾವಣೆ ಮಾಡಿದನ್ನು ಖಂಡಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಹಳೆ ಪ್ರಿನ್ಸಿಪಾಲ್ ಸಚಿನ ಪಾಟೀಲ ಬೇಕೆ ಬೇಕು ಎಂದು ಆಗ್ರಹಿಸಿದ್ದಾರೆ. ಬಡ ವಿದ್ಯಾರ್ಥಿಗಳು, ಕಾಲೇಜಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಸಚಿನ ಪಾಟೀಲ ಅವರನ್ನೇ ಮುಂದು ವರೆಸುವಂತೆ ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ