ದಾವಣಗೆರೆ:- ಜಿಲ್ಲೆಯಲ್ಲಿ ಗಂಗೆ ಉಕ್ಕಿದ್ದಾಳೆ. ಹೌದು ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ಬೋರ್ವೆಲ್ ಕೊರೆದಾಗ ನೀರು ಆಕಾಶಕ್ಕೆ ಚಿಮ್ಮಿದೆ. ತೀವ್ರ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಗುಮ್ಮನೂರ ಗ್ರಾಮ ಪಂಚಾಯಿತಿ ಬೊರ್ವೆಲ್ ಕೊರೆಸಿದೆ.
589 ಅಡಿಗೆ 6 ಇಂಚು ನೀರು ಉಕ್ಕಿದೆ. ಇಲ್ಲಿ ಒಂದು ಸಾವಿರ ಅಡಿ ಬೋರ್ವೆಲ್ ಕೊರದರೂ ನೀರು ಸಿಗುವುದಿಲ್ಲ. ಆದರೆ 589 ಅಡಿಗೆ ನೀರು ಸಿಕ್ಕಿದ್ದು, ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.