ಮುಂಬೈ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಭಗವಾಧ್ವಜ ಮತ್ತು ರಾಮಧ್ವಜದೊಂದಿಗೆ ತೆರೆಳುತ್ತಿದ್ದವರ ಮೇಲೆ ದಾಳಿ, ಕಲ್ಲುತೂರಾಟ ನಡೆದ ಘಟನೆ ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನಗರದ ಮೀರಾ ರಸ್ತೆಯಲ್ಲಿ ದುರ್ಘಟನೆ ನಡೆದಿದ್ದು ಸ್ಥಳದಲ್ಲಿ ಕೆಲಕಾಲ ಉದ್ವಿಘ್ನತೆ ಸೃಷ್ಟಿಯಾಗಿತ್ತು. ಒಂದು ಗುಂಪು ಮಹಿಳೆಯೊಬ್ಬರನ್ನು ಗುರಿಯಾಗಿರಿಸಿ ಹಲ್ಲೆ ನಡೆಸಿತ್ತು ಎಂದು ಹೇಳಲಾಗಿದೆ
https://x.com/RupaniGarcon/status/1749766037950898248?s=20
ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯುವ ಹಿನ್ನೆಲೆಯಲ್ಲಿ ಜನವರಿ 21 ರ ರಾತ್ರಿ ಮೀರಾ ರೋಡ್ನಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮುಸಲ್ಮಾನ ಬಹು ಸಂಖ್ಯಾತ ನಯಾನಗರ ಪ್ರದೇಶದಲ್ಲಿ ನಡೆದಿರುವ ಶೋಭಾಯತ್ರಿಯ ಮೇಲೆ ಕಲ್ಲೆಸೆಯಲಾಗಿತ್ತು. ಈ ದಾಳಿಯ ಅನೇಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಗರದಲ್ಲಿ ರಾಮ ಭಕ್ತರು ಭಗವಾದ್ವಜ, ರಾಮಧ್ವಜಗಳನ್ನು ತಮ್ಮ ತಮ್ಮ ವಾಹನಗಳಿಗೆ ಅಳವಡಿಸಿಕೊಂಡು ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಗಳಲ್ಲಿ ಬಂದ ಕೆಲ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಗುಂಪು ಭಗವಾದ್ವಜಗಳನ್ನು ಕಿತ್ತು ಕಲ್ಲು, ರಾಡ್, ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ. ವಾಹನಗಳ ಗಾಜು ಒಡೆದು ಹಾನಿಗೊಳಿಸಿದ್ದಾರೆ.