ಚಿತ್ರದುರ್ಗ: ಗ್ಯಾರಂಟಿ ಭಾಗ್ಯಗಳ ಎಫೆಕ್ಟ್ ಲೋಕಸಭಾ ಚುನಾವಣೆ ಮೇಲೆ ತಟ್ಟಲ್ಲ. ಬದಲಾಗಿ ಕಾಂಗ್ರೆಸ್ (Congress) ಶಾಸಕರು ಮತ ಕೇಳಲು ಹೋದರೆ ಜನ ಅವರಿಗೆ ತಟ್ಟುತ್ತಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ (Govinda Karajola) ವ್ಯಂಗ್ಯವಾಡಿದರು. ಚಿತ್ರದುರ್ಗದಲ್ಲಿ (Chitradurga) ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
Old Pension Scheme: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿಗೆ ಮಹತ್ವದ ಆದೇಶ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಮೋಸದಾಟವಾಗಿದೆ. ದೇಶದ ಬಜೆಟ್ಗಿಂತ ದೊಡ್ಡ ಬಿಟ್ಟಿಭಾಗ್ಯಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಹಿಂದೆ ಚುನಾವಣೆಗೂ ಮುನ್ನ ಅಭಿವೃದ್ಧಿ ಕಾರ್ಯಗಳ ಭರವಸೆ ನೀಡಿದ್ದರು. ಆದರೆ ಈಗ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರು ಅವರ ಕ್ಷೇತ್ರದಲ್ಲಿ ಮತ ಕೇಳಲು ಹೋಗಲು ಹೆದರುತ್ತಿದ್ದಾರೆ. ಈ ಗ್ಯಾರಂಟಿ ಭಾಗ್ಯಗಳಿಂದ ಕಾಂಗ್ರೆಸ್ ಶಾಸಕರು ಮತ ಕೇಳಲು ಹೋದರೆ ಜನ ತಟ್ಟುತ್ತಾರೆ ಎಂದರು.