ಹುಬ್ಬಳ್ಳಿ:ರೈತರಿಗೆ ಸಹಾಯ ಮಾಡುವ ಹೆಸರಲ್ಲಿ ಹಾಲಿನ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಆದರೆ ಪ್ರೋತ್ಸಾಹ ದರವನ್ನು ಎರಡು ಮೂರು ತಿಂಗಳು ಕೊಟ್ಟು ಬಂದ್ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡಿರುವುದನ್ನು ನೋಡಿದರೇ ಸರ್ಕಾರ ದಿವಾಳಿ ಎಂಬುವುದಕ್ಕೆ ಇದೊಂದೆ ಸೂಕ್ತ ನಿದರ್ಶನವಾಗಿದೆ. ಮುಡಾ, ವಾಲ್ಮೀಕಿ ನಿತ್ಯವೂ ಒಂದು ಹಗರಣ. ಕಾಂಗ್ರೆಸ್ ಸರ್ಕಾರ ಹಗರಣದ ಸಾಮ್ರಾಜ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
Urinary Infection: ಪುರುಷರನ್ನು ಕಾಡುವ ಮೂತ್ರದ ಸೋಂಕಿಗೆ ಪರಿಹಾರವೇನು? ಮನೆಯಲ್ಲೇ ಇದೆ ನೋಡಿ ಮದ್ದು!
ಕಾಂಗ್ರೆಸ್ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಭ್ರಷ್ಟಾಚಾರ ಬಿಟ್ಟರೇ ಬೇರೆ ಏನನ್ನೂ ಮಾಡುತ್ತಿಲ್ಲ. ಸರ್ಕಾರದ ವ್ಯವಸ್ಥೆ ಕುಸಿದು ಬಿದ್ದಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.