RCB ಆರ್ಭಟಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡವು ನಲುಗಿದ್ದು, SRH ಮನೆ ಅಂಗಳದಲ್ಲೇ ಬೆಂಗಳೂರು ತಂಡ ರೋಚಕ ಜಯ ದಾಖಲಿಸಿದೆ.
ಈ ರಾಶಿಯವರಿಗೆ ಮದುವೆ ಯೋಗ,ಈ ರಾಶಿಯವರಿಗೆ ಸಂತಾನ ಭಾಗ್ಯ, ಈ ರಾಶಿಯವರಿಗೆ ಸಾಲದಿಂದ ಋಣ ಮುಕ್ತಿ
ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಮೂಲಕ ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಅಬ್ಬರದ ಬ್ಯಾಟಿಂಗ್ ಮೂಲಕ ನಿಗದಿತ 20 ಓರವ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 206 ರನ್ ಗಳಿಸಿ ಹೈದರಾಬಾದ್ ಗೆಲುವಿಗೆ 207 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ 35 ರನ್ ಗಳಿಂದ ಸೋಲನ್ನಪ್ಪಿತು.
ಇನ್ನು, ಆರ್ಸಿಬಿ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಪ್ರಮುಖ ಆಟಗಾರನಾದ ಟ್ರಾವಿಸ್ ಹೆಡ್ ಕೇವಲ 1 ರನ್ ಗಳಿಸಿ ಔಟ್ ಆದರೆ, ಅಭಿಷೇಕ್ ಶರ್ಮಾ 31 ರನ್, ಅಡೇನ್ ಮಾರ್ಕಮ್ 7 ರನ್, ನಿತೀಶ್ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸಿನ್ 7 ರನ್, ಅಬ್ದುಲ್ ಸಮೀದ್ 10 ರನ್, ಪ್ಯಾಟ್ ಕಮೀನ್ಸ್ 31 ರನ್, ಭುವನೇಶ್ವರ್ ಕುಮಾರ್ 13 ರನ್ ಗಳಿಸಿದರು. ಈ ಮೂಲಕ ಕಳೆದ ಕಲೆ ಪಂದ್ಯಗಳ ಅಬ್ಬರದ ಬ್ಯಾಟಿಂಗ್ ಇಂದು ಹೈದರಾಬಾದ್ ತವರು ಮೈದಾನದಲ್ಲಿಯೇ ಕಂಡುಬರದ ಕಾರಣ SRH ತಂಡ ಆರ್ಸಿಬಿ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿತು. ಇನ್ನು, ಆರ್ಸಿಬಿ ಪರ ವಿಲ್ ಜ್ಯಾಕ್ಸ್ 1 ವಿಕೆಟ್, ಯಶ್ ದಯಾಳ್ 1 ವಿಕೆಟ್, ಸ್ವಪ್ನಿಲ್ ಸಿಂಗ್ 2 ವಿಕೆಟ್, ಕರ್ಣ ಶರ್ಮಾ 2 ವಿಕೆಟ್, ಕ್ಯಾಮರೂನ್ ಗ್ರೀನ್ 2 ವಿಕೆಟ್ ಪಡೆಯುವ ಮೂಲಕ ಭರ್ಜರಿಯಾಗಿ ಬೌಲರ್ಸ್ ಕಂಬ್ಯಾಕ್ ಮಾಡಿದರು.
ಹೈದರಾಬಾದ್ನ ರಾಜೀವ್ ಗಾಂಧೀ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ RCB ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬೌಲಿಂಗ್ ಮಾಡುವ ಸವಾಲು ಹೈದರಾಬಾದ್ ತಂಡಕ್ಕಿತ್ತು. ಆರ್ಸಿಬಿ ಪರ ಬ್ಯಾಟಿಂಗ್ ಮಾಡುತ್ತಿದ್ದು, ಫಾಫ್ ಡು ಪ್ಲೆಸಿಸ್ 25 ರನ್, ವಿರಾಟ್ ಕೊಹ್ಲಿ 51 ರನ್, ರಜತ್ ಪಾಟಿದಾರ್ 50 ರನ್, ಕ್ಯಾಮರೂನ್ ಗ್ರೀನ್ 37 ರನ್, ದಿನೇಶ್ ಕಾರ್ತಿಕ್ 11 ರನ್ ಮತ್ತು ಸ್ವಪ್ನೀಲ್ ಸಿಂಗ್ 12 ರನ್ ಗಳಿಸಿದರು.
ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 52 ರನ್ ಗಳಿಸಿದರೆ, ಪಾಟಿದಾರ್ 20 ಎಸೆತಗಳಲ್ಲಿ 50 ರನ್ ಗಳಿಸಿದರು. ಹೈದರಾಬಾದ್ ಪರ ಬೌಲಿಂಗ್ ನಲ್ಲಿ ಜಯದೇವ್ ಉನದ್ಕತ್ 3 ವಿಕೆಟ್ ಕಬಳಿಸಿದರೆ, ನಟರಾಜನ್ 2 ವಿಕೆಟ್ ಮತ್ತು ಪ್ಯಾಟ್ ಕಮಿನ್ಸ್ 2 ವಿಕೆಟ್ ಮತ್ತು ಮಾರ್ಕಂಡ್ 2 ವಿಕೆಟ್ ಪಡೆದರು. ಜಯದೇವ್ ಉನದ್ಕತ್ ಅವರು RCB ಸ್ಕೋರ್ ತಡೆಯಲು ಬೌಲಿಂಗ್ನಲ್ಲಿ ಹೆಚ್ಚಿನ ಕೊಡುಗೆ ನೀಡಿದರು. ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು ಎನ್ನಲಾಗಿದೆ.