ತುಮಕೂರು:– ಇತ್ತೀಚೆಗೆ ತುಮಕೂರು ನಗರದಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಳ ಹಿನ್ನೆಲೆ ಎಸ್ ಪಿ ಅಶೋಕ್ ಅವರು ದಂಧೆಗೆ ಬ್ರೇಕ್ ಹಾಕಲು ಖಡಕ್ ಸೂಚನೆ ನೀಡಿದ್ದಾರೆ.
The Karnataka prohibition of charging exorbitant interest act ಪ್ರಕಾರ ವರ್ಷಕ್ಕೆ 18% ಗಿಂತ
ಹೆಚ್ಚು ಬಡ್ಡಿ ವಿಧಿಸಿ ವ್ಯವಹಾರ ಮಾಡುತ್ತಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸ್ ಪಿಎಸ್ ಐ,ಸಿಪಿಐ ಅಥವಾ ಡಿವೈಎಸ್ ಪಿಗಳಿಗೆ ಸಂಪರ್ಕ ಮಾಡಿ ದೂರು ನೀಡಲು SP ಮನವಿ ಮಾಡಿದೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯವಾಣಿ ನಂಬರ್ 9480802900 ಗೆ ಕರೆ ಮಾಡಿ ದೂರು ನೀಡಬಹುದು.
ತುಮಕೂರು ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಎಸ್ ಪಿ ಪ್ಲಾನ್ ಮಾಡಿದ್ದಾರೆ. ಇನ್ನೂ ಇತ್ತೀಚೆಗೆ ಬಡ್ಡಿ ದಂಧೆಗೆ ಆತ್ಮಹತ್ಯೆ ಗಳು ನಡೆದಿದ್ದವು..ಯಾರಾದರೂ ವರ್ಷಕ್ಕೆ 18% ಹೆಚ್ಚು ಸಾಲಕ್ಕೆ ಬಡ್ಡಿ ಪಡೆಯುತ್ತಿದ್ದರೇ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಲು
ಎಸ್ ಪಿ ಅಶೋಕ್ ಮನವಿ ಮಾಡಿದ್ದಾರೆ.