ಬೆಂಗಳೂರು:- ಭಯೋತ್ಪಾದಕರಿಗಾಗಿ ಮಿಡಿದಿದ್ದು ಸೋನಿಯಾ ಗಾಂಧಿ ಎಂದು ಹೇಳುವ ಮೂಲಕ ಖರ್ಗೆಗೆ ಪ್ರಹ್ಲಾದ್ ಜೋಶಿ ತಿರುಗೇಟು ಕೊಟ್ಟಿದ್ದಾರೆ.
ಹಬ್ಬದಂದೇ ನಡೆದೋಯ್ತು ಘೋರ ಅಪರಾಧ: ಟಿಪ್ಪರ್ ಡಿಕ್ಕಿಗೆ ಯುವಕ ದುರ್ಮರಣ!
ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕಿಡಿಕಾರಿದ ಅವರು,
ಬಾಯಿ ತಪ್ಪಿ ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದು ಕರೆದರು. ಆದರೆ, ಬಟ್ಲಾ ಹೌಸ್ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗಾಗಿ ನಿಜವಾಗಿಯೂ ಕಣ್ಣೀರು ಹಾಕಿದ್ದು ಸೋನಿಯಾ ಗಾಂಧಿ. ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ವಹಿಸಿದ್ದು, 2004 ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ ರದ್ದುಗೊಳಿಸಿದ್ದು ಕಾಂಗ್ರೆಸ್. ಅಷ್ಟೇ ಅಲ್ಲ, ಅವರದೇ ಪಕ್ಷದ ಅಭ್ಯರ್ಥಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೊಂದಿಗೆ ಕೈಕುಲುಕಿದ್ದು ಎಂದು ತಮ್ಮ ಎಕ್ಸ್ ಖಾತೆ ಮೂಲಕ ವಾಗ್ದಾಳಿ ನಡೆಸಿದರು.
ಬಾಯಿ ತಪ್ಪಿ ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದು ಕರೆದರು. ಆದರೆ, ಬಟ್ಲಾ ಹೌಸ್ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗಾಗಿ ನಿಜವಾಗಿಯೂ ಕಣ್ಣೀರು ಹಾಕಿದ್ದು ಸೋನಿಯಾ ಗಾಂಧಿ. ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ವಹಿಸಿದ್ದು, 2004 ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ(POTA) ರದ್ದುಗೊಳಿಸಿದ್ದು ಕಾಂಗ್ರೆಸ್. ಅಷ್ಟೇ ಅಲ್ಲ, ಅವರದೇ ಪಕ್ಷದ ಅಭ್ಯರ್ಥಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೊಂದಿಗೆ ಕೈಕುಲುಕಿದ್ದು ಎಂದು ತಮ್ಮ ಎಕ್ಸ್ ಖಾತೆ ಮೂಲಕ ವಾಗ್ದಾಳಿ ನಡೆಸಿದರು.
ಖರ್ಗೆ ಅವರು ತಮ್ಮ ಪಾರ್ಟಿಯಲ್ಲಿ ಏನು ನಡೀತಿದೆ, ಅದರ ಆಧಾರದ ಮೇಲೆ ಹೇಳಿರಬೇಕು ಎಂದರು.ಬಾಬು ಜಗಜೀವನರಾಮ್,ಅಂಬೇಡ್ಕರ್, ಸೀತಾರಾಮ್ ಕೇಸರಿ ಅಂತವರಿಗೆ ಘೋರವಾದ ಅನ್ಯಾಯ ಮಾಡಿದ್ದಾರೆ. ಇವತ್ತು ಒಂದೆ ಒಂದು OBC ಸಮುದಾಯದವರು ಪ್ರಧಾನ ಮಂತ್ರಿ ಮಾಡಿಲ್ಲ. ಎಲ್ಲವನ್ನೂ ನಕಲಿ ಗಾಂಧಿಗಳಿಗೆ ಮೀಸಲಿಟ್ಟಿದ್ದಾರೆ. ಅವರು ನಮ್ಮ ಬಗ್ಗೆ ಏನ ಮಾತಾಡ್ತಾರೆ ಎಂದು ಕಿಡಿಕಾರಿದರು.