ಗದಗ: ಬಸವರಾಜ ಬೊಮ್ಮಾಯಿ ದಾವಣಗೆರೆ ಚಾರ್ಲಿ ಇದ್ದಂತೆ ಅಂತಾ ಸಚಿವ ಹೆಚ್.ಕೆ.ಪಾಟೀಲ್ ವ್ಯಂಗ್ಯ ವಿಚಾರ ಸಂಬಂಧ ವಿಷಾದ ವ್ಯಕ್ತಪಡಿಸಿದ ಸಚಿವರು
ನಗದಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ್ ನಾನು ಅಂದು ಹೇಳಿದ್ದು ಹಿರಿಯ ಪೈಲ್ವಾನ್, ಕಿರಿಯ ಪೈಲ್ವಾನ್ ಹೋಲಿಕೆಯ ವಿಷಯ ಇತ್ತು ಅಷ್ಟೇ ಆದ್ರೆ ಅದನ್ನ ಕೆಲವರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ ಬೊಮ್ಮಾಯಿಯವರೂ ಅದನ್ನ ತಪ್ಪು ಗ್ರಹಿಸಿದ್ರೇನೋ ಅನ್ನಿಸ್ತದೆ ಎಂದು ಹೇಳಿದರು.
ಉಪಮೇಯ, ಉದಾಹರಣೆ ಕೊಡೋದರಲ್ಲಿ ಬೊಮ್ಮಾಯಿ ಅವರನ್ನೂ ಒಳಗೊಂಡಂತೆ ಯಾರಿಗಾದ್ರೂ ಮನಸಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸ್ತೇನೆ ಎಂದರು.