ತುಮಕೂರು: ಭಿನ್ನಮತ ಶಮನಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಕಸರತ್ತು ಮುಂದುವರಿದಿದೆ. ತುಮಕೂರು ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರೋ ವಿ.ಸೋಮಣ್ಣ ಎಸ್.ಪಿ.ಚಿದಾನಂದ್ ಮನೆಗೆ ಬೆಳ್ಳಂಬೆಳಗ್ಗೆ ಧಿಢೀರ್ ಭೇಟಿ ನೀಡಿದ್ದಾರೆ.
ಎಸ್.ಪಿ.ಚಿದಾನಂದ್ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಬೆಳಗಿನ ಉಪಹಾರಕ್ಕೆ ಚಿದಾನಂದ್ ಮನೆಗೆ ಭೇಟಿ ನೀಡಿದ್ದು, ಚಿದಾನಂದ್ ಜೊತೆ ತಿಂಡಿ ತಿಂದು ಮಾತುಕತೆ ನಡೆಸಿದರು. ತಮ್ಮ ಪರ ಪ್ರಚಾರಕ್ಕೆ ಚಿದಾನಂದ್ ಗೆ ಮಾಜಿ ಸಚಿವ ವಿ.ಸೋಮಣ್ಣ ಆಹ್ವಾನ ನೀಡಿದರು.